Monday, June 15, 2020

ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಪುತ್ರಿ ವಿವಾಹ

ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಪುತ್ರಿ ಎಚ್.ಎಸ್ ಶೃತಿ ಅವರ ವಿವಾಹ ಸೋಮವಾರ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹುಬ್ಬಳ್ಳಿ ಕಡಪದ ಡಿ. ರಾಘವೇಂದ್ರ ಮಾನೆ ಅವರೊಂದಿಗೆ ನೆರವೇರಿತು. 
ಭದ್ರಾವತಿ: ನಗರದ ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಮತ್ತು ಚಂದ್ರಕಲಾ ದಂಪತಿ ಪುತ್ರಿ ಎಚ್.ಎಸ್ ಶೃತಿ ಅವರ ವಿವಾಹ ಸೋಮವಾರ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹುಬ್ಬಳ್ಳಿ ಕಡಪದ ದುರ್ಗಪ್ಪ ಮಾನೆ ಮತ್ತು ಲಕ್ಷ್ಮೀ ಮಾನೆ ದಂಪತಿ ಪುತ್ರ ಡಿ. ರಾಘವೇಂದ್ರ ಮಾನೆ ಅವರೊಂದಿಗೆ ನೆರವೇರಿತು.
ಕೊರೋನಾ ವೈರಸ್ ಹಿನ್ನಲೆಯಲ್ಲಿ ವಿವಾಹ ಮಹೋತ್ಸವ ಸರಳವಾಗಿ ನೆರವೇರಿತು. ಎರಡು ಮನೆಯ ಕುಟುಂಬ ವರ್ಗದವರು, ನಗರದ ಕೆಲವು ಗಣ್ಯ ವ್ಯಕ್ತಿಗಳು, ಪತ್ರಕರ್ತ ಮಿತ್ರರು ಸೇರಿದಂತೆ ಇನ್ನಿತರರು ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಹಾರೈಸಿದರು.

No comments:

Post a Comment