Friday, September 11, 2020

ವಿಗಾರ್ ಜನರಲ್ ಕುರಿಯಕೋಸ್ ನಿಧನ

ಕುರಿಯಕೋಸ್
ಭದ್ರಾವತಿ, ಸೆ. ೧೧: ತಾಲೂಕಿನ ಕ್ರೈಸ್ತ ಧರ್ಮ ಕ್ಷೇತ್ರದ ವಿಗಾರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರೆವರೆಂಡ್ ಫಾದರ್  ಕುರಿಯಕೋಸ್(ಶಾಜಿ) ಹೃದಯಾಘಾತದಿಂದ ನಿಧನ ಹೊಂದಿದರು.
     ಧರ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದ ಕುರಿಯಕೋಸ್ ಚಿರಪರಿಚಿತರಾಗಿದ್ದರು. ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಕೇರಳದ ಕಾಸರಗೋಡು ಜಿಲ್ಲೆಯ ಕೊನ್ನಕಾಡ್  ಧರ್ಮಕೇಂದ್ರದಲ್ಲಿ ನೆರವೇರಿತು.
      ಇವರ ನಿಧನಕ್ಕೆ ಕ್ರೈಸ್ತ ಧರ್ಮಕ್ಷೇತ್ರದ  ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್  ಮಾರ್  ಜೋಸೆಫ್ ಅರುಮಚ್ಚಾಡತ್ ಹಾಗು ಎಲ್ಲಾ ಧರ್ಮಕೇಂದ್ರದ ಗುರುಗಳು, ಸನ್ಯಾಸಿನಿಯರು ಮತ್ತು ಧರ್ಮಕ್ಷೇತ್ರದ ಎಲ್ಲಾ ಭಕ್ತಾಧಿಗಳು ಸಂತಾಪ ಸೂಚಿಸಿ ಗೌರವ ಸಲ್ಲಿಸುವ ಮೂಲಕ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

No comments:

Post a Comment