Sunday, April 4, 2021

ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಜಗದೀಶ್ ಪುನರ್ ಆಯ್ಕೆ

ಜೆ. ಜಗದೀಶ್
    ಭದ್ರಾವತಿ, ಏ. ೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಪುನರ್ ಆಯ್ಕೆಯಾಗಿದ್ದಾರೆ.
   ಭಾನುವಾರ ನಡೆದ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ. ಜಗದೀಶ್ ೧೧೭, ಸುರೇಶ್ ೩೮ ಮತ್ತು ಶ್ರೀನಿವಾಸ್ ೬೩ ಮತಗಳನ್ನು ಪಡೆದುಕೊಂಡರು. ಜೆ. ಜಗದೀಶ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೈಲಶ್ರೀ ಮತ್ತು ಕುಮಾರ್ ಆಳ್ವಾ ಇಬ್ಬರು ೮೯ ಸಮಮತಗಳನ್ನು ಹಾಗು ರಾಘವೇಂದ್ರ ೩೭ ಮತಗಳನ್ನು ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಮೂಲಕ ಆಯ್ಕೆ ನಡೆದು ಮೊದಲ ಅವಧಿಗೆ ಕುಮಾರ್ ಆಳ್ವಾ ಹಾಗು ಎರಡನೇ ಅವಧಿಗೆ ಶೈಲಶ್ರೀ ಆಯ್ಕೆಯಾಗಿದ್ದಾರೆ. ಕಾರ್ಮಿಕ ಸಂಘದ ಚುನಾವಣೆ ಇತಿಹಾಸದಲ್ಲಿ ಎರಡನೇ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಹಿಂದೆ ಮೊದಲ ಬಾರಿಗೆ ರಾಜಮ್ಮ ಎಂಬುವರು ಆಯ್ಕೆಯಾಗಿದ್ದರು.
   ಪ್ರಧಾನ ಕಾರ್ಯದರ್ಶಿಯಾಗಿ ಬಸಂತ್‌ಕುಮಾರ್ ಆಯ್ಕೆಯಾಗಿದ್ದು, ೧೨೫ ಮತಗಳನ್ನು ಹಾಗು ಅಮೃತ್‌ಕುಮಾರ್ ೮೭ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಎಂ.ಎಲ್ ಯೋಗೀಶ್, ಮನೋಹರ್, ಸುನಿಲ್, ರಾಜು, ಕುಮಾರಸ್ವಾಮಿ, ಮಂಜುನಾಥ್ ಆಯ್ಕೆಯಾಗಿದ್ದಾರೆ.
ಒಟ್ಟು ೨೨೨ ಮತಗಳಲ್ಲಿ ೨೧೮ ಮತಗಳು ಚಲಾವಣೆಯಾಗಿವೆ. ಇಳಯರಾಜ ಮತ್ತು ಅಡವೀಶಯ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

No comments:

Post a Comment