ಡಾ. ಎನ್.ಕೆ ಹೇಮಕೇಶವ
ಭದ್ರಾವತಿ: ಶಿವಮೊಗ್ಗ ಶೆಟ್ಟಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎನ್.ಕೆ ಹೇಮಕೇಶವ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಹೇಮಕೇಶವರವರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಡಾ. ಆರ್.ಆರ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ `ಪಬ್ಲಿಕ್ ಎಕ್ಸ್ಪೆಂಡಿಚರ್ ಆನ್ ಹೆಲ್ತ್ಕೇರ್ ಸರ್ವಿಸಸ್ ಇನ್ ಕರ್ನಾಟಕ ಎ ಸ್ಟಡಿ ಆಫ್ ಎನ್ಆರ್ಎಚ್ಎಂ' ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
ಹೇಮಕೇಶವರವರು ನಗರಸಭೆ ವಾರ್ಡ್ ನಂ.೯ರ ಭದ್ರಾಕಾಲೋನಿ ನಿವಾಸಿಗಳಾದ ದಿವಂಗತ ಕರಿಯಪ್ಪ ಮತ್ತು ಕಮಲಮ್ಮ ದಂಪತಿ ಸುಪುತ್ರರಾಗಿದ್ದಾರೆ.
No comments:
Post a Comment