ಅರವಿಂದ್ ಹೇಮಣ್ಣ
ಭದ್ರಾವತಿ: ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಅರವಿಂದ್ ಹೇಮಣ್ಣರವರು `ಆಡಳಿತ ನಿರ್ವಹಣಾ ಶಾಸ್ತ್ರ' ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದುಕೊಂಡಿದ್ದಾರೆ.
ಏ.೨ರಂದು ಜರುಗಿದ ವಿಶ್ವವಿದ್ಯಾನಿಲಯದ ೧೨ನೇ ವಾರ್ಷಿಕ ಘಟಿಕೋತ್ಸವದಲ್ಲಿ ಹೇಮಣ್ಣರವರು ಪದವಿ ಸ್ವೀಕರಿಸಿದರು. ಇವರು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉದ್ಯೋಗಿ ಮಹಾದೇವಿ ಹೇಮಣ್ಣರವರ ಪುತ್ರ ರಾಗಿದ್ದಾರೆ. ಇವರಿಗೆ ಕೆಇಬಿ ನೌಕರ ಲೋಕೇಶ್ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.
No comments:
Post a Comment