ಭದ್ರಾವತಿ, ನ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಇದೀಗ ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ ನೇತೃತ್ವದಲ್ಲಿ ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕಾರ್ಯಾಧ್ಯಕ್ಷರಾಗಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಉಪಾಧ್ಯಕ್ಷರಾಗಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಜೆ.ಎಸ್ ನಾಗಭೂಷಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭೆ ಸದಸ್ಯ ಎಂ.ಎ ಅಜಿತ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಗುರೇಶ್ ಮತ್ತು ಕಾಂಗ್ರೆಸ್ ಮುಖಂಡ ಬಾಲಕೃಷ್ಣ ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಬಸಂತ್ಕುಮಾರ್, ಬಿ.ಆರ್ ನಾಗರಾಜ್, ಸಿ.ವಿ ರಾಘವೇಂದ್ರ, ಎಸ್. ಮೋಹನ್, ಎಚ್. ರವಿಕುಮಾರ್, ರಾಕೇಶ್, ಬಿ.ಎನ್ ರಾಜು, ನರಸಿಂಹಚಾರ್, ಗೌರವ ಸಲಹೆಗಾರರಾಗಿ ಡಿ.ಸಿ ಮಾಯಣ್ಣ, ಕರಿಯಪ್ಪ, ಎಸ್. ಮಣಿಶೇಖರ್, ಜೆ.ಪಿ ಯೋಜೇಶ್, ಎಸ್. ಕುಮಾರ್, ಬಸವಂತಪ್ಪ, ಸುರೇಶ್, ಮಹಮ್ಮದ್ ಸನಾವುಲ್ಲಾ, ಸತ್ಯ, ಬಿ.ಜಿ ರಾಮಲಿಂಗಯ್ಯ, ರವಿ, ಸುಧಾಮಣಿ, ಲಕ್ಷ್ಮಿದೇವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಸ್ ಭೈರಪ್ಪ, ನರಸಿಂಹಮೂರ್ತಿ, ಎಂ. ನಾರಾಯಣ, ಕಾಂತರಾಜ್, ವೆಂಕೆಟೇಶ್, ಕೆಂಪಯ್ಯ, ಆರ್. ಶಂಕರ್, ನಂಜಪ್ಪ, ಎಂ.ಎಚ್ ತಿಪ್ಪೇಸ್ವಾಮಿ, ಸುರೇಶ್ ವರ್ಮಾ, ಯಲ್ಲೋಜಿರಾವ್, ರಾಮಚಂದ್ರ, ಮಾದೇಗೌಡ, ಎಸ್. ಗುಣಕರ, ಎಂ.ಎಲ್ ಯೋಗೀಶ, ಎಸ್.ಪಿ ರಾಜಣ್ಣ, ಪಿ. ರಾಜು, ಎ.ಎಲ್.ಡಬ್ಲ್ಯೂ ಕುಮಾರ್, ಪ್ರಹಲ್ಲಾದ, ಪ್ರದೀಪ್ಕುಮಾರ್ ಮತ್ತು ಕೆ.ಆರ್ ಮನುರವರನ್ನು ಆಯ್ಕೆ ಮಾಡಲಾಗಿದೆ.