Saturday, August 14, 2021

ಕಮಲಮ್ಮ ನಿಧನ

ಕಮಲಮ್ಮ
    ಭದ್ರಾವತಿ, ಆ. ೧೪: ಹಿರಿಯ ಕಾರ್ಮಿಕ ಹೋರಾಟಗಾರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ ಅವರ ಪತ್ನಿ ಕಮಲಮ್ಮ(೭೭) ಶನಿವಾರ ನಿಧನ ಹೊಂದಿದರು.
    ಪತಿ ಡಿ.ಸಿ ಮಾಯಣ್ಣ, ೩ ಗಂಡು, ೩ ಹೆಣ್ಣು ಮಕ್ಕಳು ಹಾಗು ಅಳಿಯಂದಿರು, ಸೊಸೆಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಕಮಲಮ್ಮ ಅವರು ಡಿ.ಸಿ ಮಾಯಣ್ಣ ಅವರ ಹೋರಾಟಕ್ಕೆ ಪ್ರೇರಕ ಶಕ್ತಿಯಾಗಿ, ಬೆನ್ನೆಲುಬಾಗಿ ನಿಂತಿದ್ದರು.
ಕಮ್ಮಲಮ್ಮ ಅವರ ಅಂತ್ಯಕ್ರಿಯೆ ಬೊಮ್ಮನಕಟ್ಟೆಯಲ್ಲಿರುವ ಅವರ ನಿವಾಸದ ಸಮೀಪದಲ್ಲಿರುವ ತೋಟದಲ್ಲಿ ಭಾನುವಾರ ನಡೆಯಲಿದೆ.
    ಇವರ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಜನಶಕ್ತಿ ಜಿ. ರಾಜು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಮಿಕರ ಹೋರಾಟಗಾರರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

2 comments:

  1. ಭಗವಂತ ಮೃತರ Hathama ಕ್ಕೆ ಶಾಂತಿ ನೀಡಲಿ.
    ಕೆ. ಎಂ ಸತೀಶ್

    ReplyDelete