![](https://blogger.googleusercontent.com/img/b/R29vZ2xl/AVvXsEi7ZjVzg8jEdx978TxjPM0f-CNkXoyEniLa0wdOLKH1UO2c5ukClilizVftDBAcEoymkqt7VnaIikGeWZXY1ePYvc-DnbUAwzIuFedFRhChLuraovxeOwX3K7_lVj6gHonu0hvMBUIVQj3B/w400-h270-rw/D21-BDVT1-786259.jpg)
ಭದ್ರಾವತಿ ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭದ್ರಾವತಿ, ಜೂ. ೨೧: ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಸಮಾಜದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ಸಮಾಜದ ಗೌರವಾಧ್ಯಕ್ಷ ಎಂ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ, ನಗರಸಭಾ ಸದಸ್ಯ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ, ಮುಖಂಡರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ ಹಾಗು ಎಂ.ಎನ್ ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಲೋಕೇಶ್ ಮಾಳೆನಹಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ ನಿರೂಪಿಸಿದರು. ಜಿ. ನಾಗೇಶ್ ವಂದಿಸಿದರು.