ಭದ್ರಾವತಿ, ನ. ೨೮: ಹಲವಾರು ವರ್ಷಗಳಿಂದ ಹಿಂದೂ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕದ ಉದ್ಘಾಟನೆ ನ.೨೯ರಂದು ಸಂಜೆ ೫.೩೦ಕ್ಕೆ ನಡೆಯಲಿದೆ.
ಶಿವಾಜಿ ವೃತ್ತದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಕುರಿತು ಬಾಲ ವಾಗ್ಮಿ ಹಾರಿಕ ಮಂಜುನಾಥ್ ಭಾಷಣ ಮಾಡಲಿದ್ದು, ರಾಷ್ಟ್ರೀಯ ಬಜರಂಗದಳದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಿ.ವಿ ಚಂದನ್ರಾವ್ ಕೋರಿದ್ದಾರೆ.