ನೂತನ ಅಧ್ಯಕ್ಷರಾಗಿ ಅಡವೀಶಯ್ಯ ಪದಗ್ರಹಣ
![](https://blogger.googleusercontent.com/img/a/AVvXsEh3ddTZedT8rWh2KntMNck2bVVtj5vMty5sVJEuuyZbNQdpAmKV3E_sXLuO03LoobEjpZ9QM2Xr7R-JseodDw7_qMp4M9X_wUOA8G4lOLyJI6nmnvbM_Y_CKqta8fMQMREy8PTwsAuFZc7P0OAo2wRPxiI2cgqecxVWvLK21xlT74UY4jT1qNjtKqs3QA=w400-h189-rw)
ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಡವೀಶಯ್ಯ ಅಧಿಕಾರ ಸ್ವೀಕರಿಸಿದರು.
ಭದ್ರಾವತಿ, ಜು. ೧೦: ಸೇವೆ, ತ್ಯಾಗದ ಮನೋಭಾವ ರೋಟರಿ ಸಂಕೇತವಾಗಿದ್ದು, ಕ್ಲಬ್ ಧ್ಯೇಯೋದ್ದೇಶಗಳಿಗೆ ಗೌರವ ತರುವಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕೆಂದು ರೋಟರಿ ಕ್ಲಬ್ ಮೈಸೂರು ವಿಭಾಗದ ಎಆರ್ಆರ್ಎಫ್ಸಿ ಜಿ.ಕೆ ಬಾಲಕೃಷ್ಣನ್ ಹೇಳಿದರು.
ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರದ ನೇತೃತ್ವದ ವಹಿಸಿ ಮಾತನಾಡಿದರು.
ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿ ಕ್ಲಬ್ ನೇತೃತ್ವ ವಹಿಸಿಕೊಂಡವರು ಹೆಚ್ಚಿನ ಜವಾಬ್ದಾರಿಯುತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕೆಂದರು.
ನೂತನ ಅಧ್ಯಕ್ಷರಾಗಿ ಎಸ್. ಅಡವೀಶಯ್ಯ, ಕಾರ್ಯದರ್ಶಿಯಾಗಿ ಕೆ.ಎಚ್ ಶಿವಕುಮಾರ್, ಉಪಾಧ್ಯಕ್ಷರಾಗಿ ಪಿ. ಸುಧಾಕರ್ ಶೆಟ್ಟಿ, ಖಜಾಂಚಿಯಾಗಿ ವಾದಿರಾಜ ಅಡಿಗ, ನಿರ್ದೇಶಕರಾಗಿ ಟಿ.ಎಸ್ ದುಷ್ಯಂತ್ರಾಜ್, ಪ್ರಭಾಕರ ಬೀರಯ್ಯ, ಕೆ.ಎಚ್ ತೀರ್ಥಯ್ಯ, ಡಾ. ಕೆ. ನಾಗರಾಜ್, ಅಮಿತ್ಕುಮಾರ್ ಜೈನ್, ವಿವಿಧ ವಿಭಾಗಗಳ ಛೇರ್ಮನ್ಗಳಾಗಿ ಜಿ. ರಾಘವೇಂದ್ರ ಉಪಾಧ್ಯಾಯ, ರಾಘವೇಂದ್ರ ರಾವ್, ಡಾ. ಆರ್.ಸಿ ಬೆಂಗಳೂರ್, ಕೆ.ಎಸ್ ಶೈಲೇಂದ್ರ ಮತ್ತು ಹಾಲೇಶ್ ಎಸ್. ಕೂಡ್ಲಿಗೆರೆ, ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಲತಾ ದುಷ್ಯಂತ್ ರಾಜ್, ಕಾರ್ಯದರ್ಶಿಯಾಗಿ ಡಾ. ಮಯೂರಿ ಮಲ್ಲಿಕಾರ್ಜುನ ಪದಗ್ರಹಣ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ಎಚ್.ವಿ ಆದರ್ಶ್ ಮಾತನಾಡಿ, ನನ್ನ ಅವಧಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಿರ್ಗಮಿತ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ಸಹಾಯಕ ಗೌವರ್ನರ್ ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಸುಮ ತೀರ್ಥಯ್ಯ ಪ್ರಾರ್ಥಿಸಿದರು.