Saturday, June 13, 2020

ಬಿಎಸ್‌ಪಿ ಅಧ್ಯಕ್ಷರಾಗಿ ಬಿ.ಆರ್ ಸತೀಶ್

ಭದ್ರಾವತಿ, ಜೂ. ೧೩: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿ ಪುನರ್ ರಚಿಸಿದ್ದು, ಅಧ್ಯಕ್ಷರಾಗಿ ಬಿ.ಆರ್ ಸತೀಶ್ ನೇಮಕಗೊಂಡಿದ್ದಾರೆ.
ಸಂಯೋಜಕರಾಗಿ ವಿ. ರಾಜಶೇಖರ್, ಉಪಾಧ್ಯಕ್ಷರಾಗಿ ಸೋಮು, ಎಂ. ಶಿವಮೂರ್ತಿ, ಡಿ. ಮಹೇಶ್ವರನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ನಾಗಾನಾಯ್ಕ, ಕಾರ್ಯದರ್ಶಿಯಾಗಿ ಜಯರಾಜ್, ಖಜಾಂಚಿಯಾಗಿ ನಾಗರಾಜ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೀವನ್‌ರಾವ್, ಸಿ. ಚಂದ್ರಪ್ಪ, ಕಾಡಪ್ಪ, ಮಹೇಶ್, ರಮೇಶ್, ಬಾಲಕಾಶಿ, ಶ್ರೀನಿವಾಸ್ ಮತ್ತು ಸಹೋದರತ್ವ ಸಮಿತಿ ಸಂಯೋಜಕರಾಗಿ ನಾದನ್ ಮತ್ತು ಸಹ ಸಂಯೋಜಕರಾಗಿ ಜಾವೇದ್ ಖಾನ್ ಹಾಗೂ ಎನ್. ಓಂಕಾರನಾಯ್ಕ ಅವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ತಿಳಿಸಿದ್ದಾರೆ.

No comments:

Post a Comment