Friday, July 3, 2020

ಎಲ್ಲರ ಸಹಕಾರದಿಂದ ಸೇವಾ ಕಾರ್ಯ ಯಶಸ್ವಿ : ಎನ್.ಎಸ್ ಶ್ರೀಧರ್

ಭದ್ರಾವತಿ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಶುಕ್ರವಾರ ಬಿ.ಎಂ ಶಾಂತಕುಮಾರ್ ಅಧಿಕಾರ ಸ್ವೀಕರಿಸಿದರು. 
ಭದ್ರಾವತಿ, ಜು. ೩: ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸೇವಾ ಕಾರ್ಯಗಳು ಯಶಸ್ವಿಗೊಳ್ಳುತ್ತವೆ ಎಂದು ಸಹಾಯಕ ಜಿಲ್ಲಾ ಗೌರ‍್ನರ್ ಎನ್.ಎಸ್ ಶ್ರೀಧರ್ ತಿಳಿಸಿದರು. 
ಅವರು ಶುಕ್ರವಾರ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. 
ಯಾವುದೇ ಕಾರ್ಯ ಪೂರ್ಣಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅತಿ ಅವಶ್ಯಕ ಎಂಬುದನ್ನು ಮುಂಚೂಣಿ ನಾಯಕರು ಅರಿತುಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಸೇವೆಗೆ ಮುಂದಾಗಬೇಕೆಂದರು. 
ನಿಕಟ ಪೂರ್ವ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ ತಮ್ಮ ಅಧಿಕಾರದ ಅವಧಿಯಲ್ಲಿನ ಸೇವಾ ಕಾರ್ಯಗಳನ್ನು ಸ್ಮರಿಸಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 
ನಿಕಟ ಪೂರ್ವ ಕಾರ್ಯದರ್ಶಿ ಅಡವೀಶಯ್ಯ ತಮ್ಮ ಅವಧಿಯ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಝೋನಲ್ ಟ್ರೈನರ್ ರವೀಂದ್ರನಾಥ್ ಐತಾಳ್, ಝೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್ ಮಾತನಾಡಿದರು. 
ನೂತನ ಕಾರ್ಯದರ್ಶಿ ಎಂ.ಎನ್ ಗಿರೀಶ್, ಆನ್ಸ್ ಕ್ಲಬ್ ಅಧ್ಯಕ್ಷೆ ಕುಸುಮ ತೀರ್ಥಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಅವರಿಗೆ ಗೌರವ ಸದಸ್ಯತ್ವದೊಂದಿಗೆ ಅಭಿನಂದಿಸಲಾಯಿತು. 
ಕಾರ್ಯದರ್ಶಿ ಬಿ. ಮಂಜುನಾಥ್, ಖಜಾಂಚಿ ಅಮಿತ್ ಕುಮಾರ್ ಜೈನ್, ವಿವಿಧ ವಿಭಾಗಗಳ ನಿರ್ದೇಶಕರಾದ ಕೂಡ್ಲಿಗೆರೆ ಎಸ್ ಹಾಲೇಶ್, ಪ್ರಭಾಕರ ಬೀರಯ್ಯ, ಧರ್ಮೇಂದ್ರ, ವಿವಿಧ ವಿಭಾಗಗಳ ಛೇರ‍್ಮನ್‌ಗಳಾದ ಆರ್.ಸಿ ಬೆಂಗಳೂರಿ, ಟಿ.ಎಸ್ ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಘವೇಂದ್ರ ಉಪಧ್ಯಾಯ ಕಾರ್ಯಕ್ರಮ ನಿರೂಪಸಿದರು.   

No comments:

Post a Comment