ಭದ್ರಾವತಿ ಜನ್ನಾಪುರ ಬಬ್ಬೂರು ಕಮ್ಮೆ ವಿಪ್ರ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರು ವಂದನೆ ಕಾರ್ಯಕ್ರಮದಲ್ಲಿ ಯೋಗ ಗುರು ಮಹೇಶ್ ಗುರೂಜಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಜು. ೭: ಪ್ರಸ್ತುತ ಎದುರಾಗಿರುವ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ನಮ್ಮ ದೇಹ ರೋಗ ನಿರೋಧಕ ಶಕ್ತಿ ಹೊಂದಲು ಯೋಗ ಸಹಕಾರಿಯಾಗಿದೆ ಎಂದು ಯೋಗ ಗುರು ಮಹೇಶ್ ಗುರೂಜೀ ತಿಳಿಸಿದರು.
ಅವರು ಜನ್ನಾಪುರ ಬಬ್ಬೂರು ಕಮ್ಮೆ ವಿಪ್ರ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗುರು ವಂದನೆ ಸ್ವೀಕರಿಸಿ ಮಾತನಾಡಿದರು.
ಪ್ರತಿದಿನ ಹೆಚ್ಚು ಪ್ರಾಣಾಯಾಮ ಮತ್ತು ಶಕ್ತಿ ಕ್ರಿಯೆಗಳನ್ನು ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.
ನಮ್ಮಲ್ಲಿನ ಅಂಧಕಾರ ತೊಡೆದು ಹಾಕುವವರು ಗುರು, ಸಂಕಷ್ಟಗಳಿಂದ ಮುಕ್ತಿಗೊಳಿಸುವವರು ಗುರು. ಎಲ್ಲರೂ ಗುರುವನ್ನು ಗೌರವಿಸಿ ಅವರ ತೋರಿಸಿಕೊಟ್ಟ ದಾರಿಯಲ್ಲಿ ಸಾಗಬೇಕೆಂದರು.
ದಾಕ್ಷಾಯಿಣಿ, ಆರ್. ಲಕ್ಷ್ಮಿ, ಪುಷ್ಪ, ವಾಣಿ, ಲಕ್ಷ್ಮಿ, ಶೈಲಜ, ಕಲ್ಪನ, ಮುನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಾಗಮಣಿ ಸ್ವಾಗತಿಸಿದರು. ಭ್ಯಾಗ ಪ್ರಾರ್ಥಿಸಿದರು.
No comments:
Post a Comment