೪೦೦ ವರ್ಷಗಳಿಗೊಮ್ಮೆ ಕಂಡು ಬರುವ ಆಕಾಶ ಕಾಯಗಳ ವಿಸ್ಮಯ ಟೆಲಿಸ್ಕೋಪ್ ಮೂಲಕ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿರುವ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ.
ಭದ್ರಾವತಿ, ಡಿ. ೨೦: ೪೦೦ ವರ್ಷಗಳಿಗೊಮ್ಮೆ ಆಕಾಶ ಕಾಯಗಳಲ್ಲಿ ಕಂಡು ಬರುವ ವಿಸ್ಮಯಗಳಲ್ಲಿ ಒಂದಾಗಿರುವ ಗುರು ಮತ್ತು ಶನಿ ಗ್ರಹಗಳ ಸನಿಹ ಸಮಾಗಮ ಡಿ.೨೧ರಂದು ಕಂಡು ಬರಲಿದ್ದು, ಈ ಶತಮಾನದ ಅಪರೂಪದ ವಿಶೇಷಗಳಲ್ಲಿ ಒಂದಾಗಿರುವ ಈ ವಿಸ್ಮಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜೊತೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವಲ್ಲಿ ನಗರದ ಹವ್ಯಾಸಿ ಖಗೋಳ ವೀಕ್ಷಕ, ಶಿಕ್ಷಕ ಹರೋನಹಳ್ಳಿ ಸ್ವಾಮಿ ಮುಂದಾಗಿದ್ದಾರೆ.
ಗುರು ಮತ್ತು ಶನಿ ಈ ಎರಡು ದೈತ್ಯ ಗ್ರಹಗಳು ಅತಿ ಸಮೀಪದಲ್ಲಿರುವಂತೆ ಭೂಮಿಯಿಂದ ನೋಡುವ ವೀಕ್ಷಕರಿಗೆ ಕಂಡು ಬರುತ್ತದೆ. ಈ ವಿಸ್ಮಯ ೪೦೦ ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವಿಸ್ಮಯವನ್ನು ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್ಗಳ ಮೂಲಕವೂ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಭೂಮಿ, ಗುರು ಮತ್ತು ಶನಿ ಗ್ರಹಗಳು ಒಂದೇ ನೇರದಲ್ಲಿ ಕಂಡು ಬರುತ್ತಿರುವುದೇ ಈ ವಿಸ್ಮಯಕ್ಕೆ ಕಾರಣವಾಗಿದ್ದು, ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಸಹ ಕಾರಣವಾಗಿವೆ ಎನ್ನುತ್ತಾರೆ ಹರೋನಹಳ್ಳಿ ಸ್ವಾಮಿ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: ೯೮೮೦೪೯೮೩೦೦ ಅಥವಾ ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
No comments:
Post a Comment