Sunday, January 10, 2021

ರಾಮ ಸೇನಾ ಕರ್ನಾಟಕ ಸಂಘಟನೆಯಿಂದ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.
ಭದ್ರಾವತಿ, ಜ. ೧೦:  ಹಿಂದೂ ಧರ್ಮ ಸಂಸ್ಕೃತಿ ಜೊತೆಗೆ ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ರಾಮ ಸೇನಾ ಕರ್ನಾಟಕ ಸಂಘಟನೆ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಆಚರಿಸಿ ಸರ್ಕಾರಿ ಶಾಲೆಯ ವೈಭವ ಮತ್ತಷ್ಟು ಹೆಚ್ಚಿಸುವ ಮೂಲಕ ಗಮನ ಸೆಳೆದಿದೆ.
     ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಮಂದಿ ಹೆಚ್ಚು. ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಬದಲು ಖಾಸಗಿ ಶಾಲೆಗಳ ಅಭಿವೃದ್ಧಿಗೆ ಮುಂದಾಗುವವರೇ ಹೆಚ್ಚು. ಸರ್ಕಾರಿ ಉದ್ಯೋಗ ಬೇಕು ಸರ್ಕಾರಿ ಶಾಲೆ ಬೇಡ ಎನ್ನುವ ಜನರ ನಡುವೆ. ಕರ್ನಾಟಕ ರಾಮ್ ಸೇನಾ ವಿಶಿಷ್ಟವಾಗಿ ಇದೀಗ ಗಮನ ಸೆಳೆದಿದೆ.
    ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.


   ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿರುವ ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ.
   ಒಂದೆಡೆ ಖಾಸಗಿ ಬಸ್‌ಗಳ ನಡುವೆ ಸರ್ಕಾರಿ ಬಸ್‌ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳ ಕುರಿತು ಜಾಗೃತಿ ಮೂಡಿಸಲು ಶಾಲೆಯ ಕೊಠಡಿಯನ್ನು ಸರ್ಕಾರಿ ಬಸ್ ಮಾದರಿಯಂತೆ ನಾಗಪ್ರಸಾದ್ ತಮ್ಮ ಕೈಚಳಕದಲ್ಲಿ ಅನಾವರಣಗೊಳಿಸಿದ್ದಾರೆ.
     ಇದೆ ರೀತಿ ಪರಿಸರ ಪ್ರಜ್ಞೆ, ಮಹಾನ್ ಸಾಧಕರು ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಕನ್ನಡ ಅಕ್ಷರಗಳಿಂದ ಹಾಗು ಆಕರ್ಷಕ ಚಿತ್ತಾರಗಳಿಂದ ಶಾಲೆಯನ್ನು ಮಕ್ಕಳ ಆಕರ್ಷಕ ತಾಣವನ್ನಾಗಿಸಲಾಗಿದೆ.  
    ಪತ್ರಿಕೆಯೊಂದಿಗೆ ಮಾತನಾಡಿದ ಉಮೇಶ್, ಕೊರೋನಾ ಸಂದರ್ಭದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಅಚರಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಅದರಂತೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ  ಸಣ್ಣ ಪ್ರಯತ್ನ ಕೈಗೊಳ್ಳಲಾಗಿದೆ. ಈ ರೀತಿಯ ಪ್ರಯತ್ನ ಎಲ್ಲೆಡೆ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.  

No comments:

Post a Comment