Friday, January 8, 2021

ಜೈನ ಮುನಿಗಳ ಆಗಮನಕ್ಕೆ ಸಂಭ್ರಮ : ಭಕ್ತರಿಗೆ ಪ್ರಸಾದ ವಿತರಣೆ

ಭದ್ರಾವತಿ, ಜ. ೮: ಶ್ರೀ ರುಷಿಪಾಲ್ ವಿಜಯಜೀ ಹಾಗೂ ಶ್ರೀ ಬಿಮಾ ರತನವಿಜಯಜೀಯವರು ಜೈನ ಧರ್ಮದ ದೀಕ್ಷೆ ಪಡೆದು ೫ ವರ್ಷಗಳ ನಂತರ ನಗರಕ್ಕೆ ಆಗಮಿಸಿರುವ ಸಂಭ್ರಮದ ಹಿನ್ನಲೆಯಲ್ಲಿ ಹಾಗು ಜೈನರ ೨೩ನೇ ತೀರ್ಥಂಕರರಾದ ಪ್ರಭು ಪಾರ್ಶ್ವನಾಥ ಭಗವಾನರ ಜನ್ಮದಿನ ಮತ್ತು ದೀಕ್ಷಾ ಮಹೋತ್ಸವದ ಅಂಗವಾಗಿ ಜೈನ ಸಮಾಜದ ವತಿಯಿಂದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ನಗರದ ಚನ್ನಗಿರಿ ರಸ್ತೆಯ ಸಪ್ನ ಪಾನ್ ಬ್ರೋಕರ‍್ಸ್ ಹಾಗು ಶ್ರೀ ಭೇರು ಕ್ಲಾತ್ ಸೆಂಟರ್ ಮಾಲೀಕರಾದ ದಿನೇಶ್‌ಕುಮಾರ್ ಜೈನ್ ಹಾಗು ರಾಜುಲ್ ಜೈನ್ ದಂಪತಿ ಪುತ್ರರಾದ ರಿಷಬ್‌ಕುಮಾರ್ ಜೈನ್ ತಮ್ಮ ೨೫ನೇ ವಯಸ್ಸಿನಲ್ಲಿ ಮತ್ತು ಜಿನೇಶ್ ಕುಮಾರ್ ಜೈನ್ ೨೩ನೇ ವಯಸ್ಸಿನಲ್ಲಿ ಆಚಾರ್ಯವರ್ಯರಾದ ಶ್ರೀ ಹೀರಚಂದ್ರಸುರೀಶ್ವರಜಿ ಮಹಾರಾಜ್‌ರವರ ಧಾರ್ಮಿಕ ಪ್ರವಚನಗಳಿಂದ ಪ್ರಭಾವಿತರಾಗಿ ೫ ವರ್ಷಗಳ ಹಿಂದೆ ಜೈನ ಧರ್ಮದ ದೀಕ್ಷೆ ಪಡೆದು ಕೊಂಡಿದ್ದರು. ನಂತರ ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು ಕಳೆದ ೫ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಭಕ್ತರಿಗೆ ಸಿಹಿ ವಿತರಿಸುವ ಮೂಲಕ ಜೈನ ಸಮಾಜ ಈ ಸಂಭ್ರಮವನ್ನು ವಿಶೇಷವಾಗಿ ಹಂಚಿಕೊಳ್ಳುತ್ತಿದೆ.



No comments:

Post a Comment