Thursday, May 27, 2021

ನೂತನ ಬಿಪಿಎಲ್ ಸಂಘ ಅಸ್ತಿತ್ವಕ್ಕೆ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಮುಂಭಾಗ ನೂತನವಾಗಿ ಬಿ.ಪಿ.ಎಲ್ ಸಂಘ(ಭದ್ರಾವತಿ ಪ್ರಜಾ ವಿಮೋಚನೆ) ಅಸ್ತಿತ್ವಕ್ಕೆ ಬಂದಿದ್ದು, ಗುರುವಾರ ಸಂಘದ ಕಛೇರಿ ಉದ್ಘಾಟಿಸಲಾಯಿತು.

    ಭದ್ರಾವತಿ, ಮೇ. ೨೭: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಮುಂಭಾಗ ನೂತನವಾಗಿ ಬಿ.ಪಿ.ಎಲ್ ಸಂಘ(ಭದ್ರಾವತಿ ಪ್ರಜಾ ವಿಮೋಚನೆ) ಅಸ್ತಿತ್ವಕ್ಕೆ ಬಂದಿದ್ದು, ಗುರುವಾರ ಸಂಘದ ಕಛೇರಿ ಉದ್ಘಾಟಿಸಲಾಯಿತು.
    ಈಗಾಗಲೇ ಸಂಘದ ವತಿಯಿಂದ ಕೋವಿಡ್ ಲಾಕ್‌ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀಡುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ನೂತನ ಸಂಘದ ಸೇವಾ ಕಾರ್ಯದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಿದ್ದಾರೆ.
    ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಎಂ. ಮುಕುಂದನ್, ಕಾರ್ಯಾಧ್ಯಕ್ಷ ಎಂ. ರವಿಕುಮಾರ್, ಉಪಾಧ್ಯಕ್ಷರಾದ ಸಾಮ್ಯುಯೆಲ್, ವಿಲಿಯಂ ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್, ಕಾರ್ಯದರ್ಶಿ ಎಂ.ಸಿ ಸುನಿಲ್‌ಕುಮಾರ್, ಸಹಕಾರ್ಯದರ್ಶಿ ಜಿ. ಗೋವಿಂದ, ಖಜಾಂಚಿ ಎ.ವಿ ಮುರುಳಿಕೃಷ್ಣ, ನಿರ್ದೇಶಕರಾದ ಶ್ರೀಕಾಂತ್, ಎನ್. ನವೀನ್‌ಕುಮಾರ್, ಆರ್. ರವೀಂದ್ರಪ್ಪ, ಸಿ. ಉಮಾಶಂಕರ್, ಜಿ. ಕರುಣಾನಿಧಿ, ಎನ್. ಲೋಕೇಶ್, ಬಿ.ವೈ. ಅಜಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment