ಭದ್ರಾವತಿ ತಾಲೂಕು ಆರ್ಕೇಸ್ಟ್ರಾ ಕಲಾವಿದರ ಸಂಘದಿಂದ ಬಡ ಕಲಾವಿದರಿಗೆ ಗುರುವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಭದ್ರಾವತಿ, ಜೂ. ೧೭: ತಾಲೂಕು ಆರ್ಕೇಸ್ಟ್ರಾ ಕಲಾವಿದರ ಸಂಘದಿಂದ ಬಡ ಕಲಾವಿದರಿಗೆ ಗುರುವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ಅವರ ನೆರವಿನೊಂದಿಗೆ ಸುಮಾರು ೩೫ ಮಂದಿ ಬಡ ಕಲಾವಿದರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಲಾಯಿತು.
ಸಂಘದ ಅಧ್ಯಕ್ಷ ಯಶೋಧರಯ್ಯ(ಪುಟ್ಟಣ್ಣ), ಎಂ. ಪಳನಿರಾಜ್, ಡಿ.ವಿಜಯ್ ದಯಾಕರ್, ಬಿ.ಆರ್ ಗೋಪಾಲ್, ಎಂ. ರಾಜು, ಬಾಬುಜಾನ್, ಬಿ. ನಾಗರಾಜ್, ಅವಿನಿ ಸುಸನ್ನಾ, ರೇಖಾ, ಸ್ವಾತಿ, ಗಂಗಾಧರ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
No comments:
Post a Comment