ಭದ್ರಾವತಿಯಲ್ಲಿ ತಾಯಿ ಮಡಿಲು ಸೇವಾ ಸಂಸ್ಥೆ ಹಾಗು ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಮತ್ತು ದಾನಿಗಳ ಸಹಕಾರದಿಂದ ಕೊರೋನಾ ಪರಿಣಾಮ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಭದ್ರಾವತಿ, ಜೂ. ೬ : ನಗರದ ತಾಯಿ ಮಡಿಲು ಸೇವಾ ಸಂಸ್ಥೆ ಹಾಗು ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಮತ್ತು ದಾನಿಗಳ ಸಹಕಾರದಿಂದ ಕೊರೋನಾ ಪರಿಣಾಮ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಸೇವೆಗಾಗಿ ಬಾಳು ಎಂಬ ಧ್ಯೇಯದೊಂದಿಗೆ ಸುಮಾರು ೪೦೦ಕ್ಕೂ ಹೆಚ್ಚು ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿರುವ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ ಹಾಗು ಸೇವಾಕರ್ತರಾದ ಆಶಾ, ರಾಜು ಅವರನ್ನೊಳಗೊಂಡ ತಂಡ ಇದುವರೆಗೂ ತೀರ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು ೨೦ಕ್ಕೂ ಅಧಿಕ ಮಂದಿಯನ್ನು ಗುರುತಿಸಿ ಅಗತ್ಯವಿರುವ ದಿನಸಿ ಸಾಮಗ್ರಿ ವಿತರಿಸಿದೆ.
ಈ ಕಾರ್ಯಕ್ಕೆ ನೆರವಾಗಿರುವ ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾಸ್ಟರ್ ಅಬ್ರಾಹಂ, ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷ ರಾಜು, ಜಯಪ್ರಕಾಶ್ ಸೇರಿದಂತೆ ಇನ್ನಿತರರಿಗೆ ದಾನಿಗಳ ಪರವಾಗಿ ಅನಿತಾ ಮೇರಿ ಕೃತಜ್ಞತೆ ಸಲ್ಲಿಸಿದ್ದಾರೆ.
Great service mam for the needy by you and all your team.god bless you and all your team and family....
ReplyDeleteSalute to smt anitha Mary
Delete