ಮಾಜಿ ಶಾಸಕ ಎಂ.ಜೆ ಅಪ್ಪಾಜಿ
ಭದ್ರಾವತಿ, ಜೂ. ೧೯: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೬೮ನೇ ಹುಟ್ಟುಹಬ್ಬ ಜೂ.೨೦ರಂದು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಂದ ನಗರದ ವಿವಿಧೆಡೆ ಸರಳವಾಗಿ ನಡೆಯಲಿದೆ.
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆಯುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ಕುಟುಂಬ ವರ್ಗದವರಿಂದ ಬಿ.ಎಚ್ ರಸ್ತೆ ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಸಂಜೆ ೬ ಗಂಟೆಗೆ ಹುಟ್ಟುಹಬ್ಬದ ಅಂಗವಾಗಿ ಸಿಹಿ ವಿತರಣೆ ನಡೆಯಲಿದೆ.
ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ನೇತೃತ್ವದಲ್ಲಿ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ನಡೆಯಲಿದೆ.
ವಾರ್ಡ್ ನಂ.೨೧ರ ನಗರಸಭಾ ಸದಸ್ಯೆ ವಿಜಯ ಹಾಗು ಸಮಾಜ ಸೇವಕ ಅಶೋಕ್ಕುಮಾರ್ ನೇತೃತ್ವದಲ್ಲಿ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಸರ್.ಎಂ. ವಿಶೇಶ್ವರಯ್ಯ ಪ್ರತಿಮೆ ಬಳಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ನಗರಸಭೆ ವಾರ್ಡ್ ನಂ.೨೫ರ ನಗರಸಭಾ ಸದಸ್ಯ ಉದಯ್ಕುಮಾರ್, ಮುಖಂಡ ಎಂ. ರಾಜು ನೇತೃತ್ವದಲ್ಲಿ ಹುಟ್ಟುಹಬ್ಬದ ಅಂಗವಾಗಿ ಬೆಳಿಗ್ಗೆ ೯.೩೦ಕ್ಕೆ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಬಳಿ ಪ್ರೊ. ಬಿ. ಕೃಷ್ಣಪ್ಪ ವೃತ್ತದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ಇದೆ ರೀತಿ ಜಿಂಕ್ಲೈನ್, ಬಾರಂದೂರು, ಕಾರೇಹಳ್ಳಿ, ಬಿಆರ್ಪಿ ಮತ್ತು ಗೋಣಿಬೀಡು ಸೇರಿದಂತೆ ಹಲವೆಡೆ ಅಭಿಮಾನಿಗಳು, ಕಾರ್ಯಕರ್ತರಿಂದ ಹುಟ್ಟುಹಬ್ಬ ಆಚರಣೆ ನಡೆಯಲಿದೆ.
No comments:
Post a Comment