ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಲಪ್ಪಶೆಡ್ನಲ್ಲಿರುವ ನಾಗರ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.
ಭದ್ರಾವತಿ, ಆ. ೧೩: ನಗರದೆಲ್ಲೆಡೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ನಾಗರ ದೇವಸ್ಥಾನ, ನಾಗಬನ, ನಾಗರಕಟ್ಟೆ ಹಾಗು ವಿವಿಧ ದೇವಸ್ಥಾನಗಳಲ್ಲಿ ನಾಗರಪಂಚಮಿ ಅಂಗವಾಗಿ ನಾಗರ ಹುತ್ತಕ್ಕೆ ತುಪ್ಪದ ನೈವೇದ್ಯದೊಂದಿಗೆ ಹಾಲು ಎರೆಯಲಾಯಿತು. ಮಳೆ ಇಲ್ಲದ ಕಾರಣ ಭಕ್ತರು ಮನೆಗಳಿಂದ ಹೊರಬಂದು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡರು.
ಕಳೆದ ವರ್ಷ ಕೋವಿಡ್-೧೯ ಸೋಂಕು ವ್ಯಾಪಕವಾಗಿ ವ್ಯಾಪಿಸಿದ್ದ ಹಿನ್ನಲೆಯಲ್ಲಿ ಆಚರಣೆ ಮೊಟಕುಗೊಂಡಿದ್ದು, ಈ ಬಾರಿ ೩ನೇ ಅಲೆ ಪ್ರಾರಂಭದ ಹಂತದಲ್ಲಿರುವ ಮುನ್ಸೂಚನೆ ಕಂಡು ಬರುತ್ತಿದೆ. ಆದರೂ ಸಹ ಭಕ್ತರು ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದೆ ಇರುವುದು ಕಂಡು ಬಂದಿತು.
ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಕೆರೆ ಸಮೀಪದಲ್ಲಿರುವ ಶ್ರೀ ಅಶ್ವಥ್ಕಟ್ಟೆ ಮತ್ತು ಶ್ರೀ ನಾಗದೇವರ ಕಟ್ಟೆ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.
No comments:
Post a Comment