Tuesday, November 23, 2021

ಕೆಸರಿನ ಗದ್ದೆಯಂತಾದ ರಸ್ತೆ : ಗ್ರಾಮಸ್ಥರ ಸಂಚಾರಕ್ಕೆ ತೊಂದರೆ


ಭದ್ರಾವತಿ ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಭದ್ರಾವತಿ, ನ. ೨೩: ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಸಂಜೀವ ನಗರದಿಂದ ಕೊಮಾರನಹಳ್ಳಿಗೆ ಸಂಚರಿಸಲು ಇರುವ ಪ್ರಮುಖ ರಸ್ತೆ ಇದಾಗಿದ್ದು, ತುಂಬಾ ಹಾಳಾಗಿ ಅಲ್ಲಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿವೆ. ಜೊತೆಗೆ ಜಲ್ಲಿಕಲ್ಲು ಕಿತ್ತುಕೊಂಡು ಹೊರಬಂದಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗುತ್ತಿದೆ.
    ಈ ರಸ್ತೆಯನ್ನು ತಕ್ಷಣ ದುರುಸ್ತಿಪಡಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ, ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗು ಶಾಸಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

No comments:

Post a Comment