Monday, January 10, 2022

ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ಸಂತಾಪ

ಕನ್ನಡ ಹೋರಾಟಗಾರ, ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ಭದ್ರಾವತಿ ಜಯಶ್ರೀ ವೃತ್ತದ ಹಿರಿಯ ನಾಗರೀಕರ ತಂಗುದಾಣದಲ್ಲಿ ಸೋಮವಾರ ಸಂಜೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೦ : ಕನ್ನಡ ಹೋರಾಟಗಾರ, ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ನಗರದ  ಜಯಶ್ರೀ ವೃತ್ತದ ಹಿರಿಯ ನಾಗರೀಕರ ತಂಗುದಾಣದಲ್ಲಿ ಸೋಮವಾರ ಸಂಜೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಪ್ರೊ. ಚಂದ್ರಶೇಖರ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿ ಮೌನಾಚರಣೆ ನಡೆಸಿ ಕನ್ನಡ ನಾಡು-ನುಡಿಗಾಗಿ ಅವರು ನಡೆಸಿದ ಹೋರಾಟ, ಭಾಷೆಯ ಮೇಲಿನ ಅಭಿಮಾನ, ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.
    ಕನ್ನಡ ಸಾಹಿತ್ಯ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ಸತೀಶ್, ಜಾನಪದ ಪರಿಷತ್ ಪ್ರಮುಖರಾದ ಕೆ.ಟಿ ಪ್ರಸನ್ನ, ಕನ್ನಡ ಸಾಹಿತ್ಯ ಸಾಂಸ್ಕೃತಿ ವೇದಿಕೆ ಪ್ರಮುಖರಾದ ಕೋಗಲೂರು ತಿಪ್ಪೇಸ್ವಾಮಿ, ಸುಮತಿ ಕಾರಂತ್, ಸಾಹಿತ್ಯಾಭಿಮಾನಿಗಳಾದ ಭಾಗ್ಯಮ್ಮ, ಇಂದಿರಾ, ಕೇರಳ ಸಮಾಜಂ ಪ್ರಧಾನ ಕಾರ್ಯದರ್ಶಿ ಸುರೇಶ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಹಿರಿಯ ನಾಗರೀಕರು ಪಾಲ್ಗೊಂಡಿದ್ದರು.

No comments:

Post a Comment