ಚಾರ್ಲ್ಸ್ ಆನಂದರಾಜ್
ಭದ್ರಾವತಿ, ಜ. ೩: ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಖಜಾಂಚಿ, ಜನ್ನಾಪುರ ರಾಜಪ್ಪ ಲೇಔಟ್ ನಿವಾಸಿ ಚಾರ್ಲ್ಸ್ ಆನಂದರಾಜ್(೬೪) ಭಾನುವಾರ ನಿಧನ ಹೊಂದಿದರು.
ಪತ್ನಿ, ೧ ಗಂಡು, ೧ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಆನಂದರಾಜ್ ಎಂಪಿಎಂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆಯಲ್ಲಿರುವ ಸಂಯುಕ್ತ ಕ್ರೈಸ್ತರ ಸಮಾಧಿಯಲ್ಲಿ ಸೋಮವಾರ ನೆರವೇರಿತು.
ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ನೂತನ ಅಧ್ಯಕ್ಷ ಆರ್. ಮೋಸಸ್, ಬಿಪಿಎಲ್ ರವಿಕುಮಾರ್, ಎಎಪಿ ಪಕ್ಷದ ಎಚ್. ರವಿಕುಮಾರ್, ಎಂಪಿಎಂ ನಿವೃತ್ತ ಕಾರ್ಮಿಕರು, ಕ್ರೈಸ ಸಮುದಾಯದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment