Saturday, March 19, 2022

ಯುಗಾದಿ ಕವಿಗೋಷ್ಠಿ : ಆಸಕ್ತ ಕವಿಗಳಿಂದ ಕವನ ಆಹ್ವಾನ

    ಭದ್ರಾವತಿ, ಮಾ. ೧೯: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಯುಗಾದಿ ಕವಿಘೋಷ್ಠಿ ಹಮ್ಮಿಕೊಳ್ಳುತ್ತಿದ್ದು, ಆಸಕ್ತ ಕವಿಗಳಿಂದ ಕವನಗಳನ್ನು  ಆಹ್ವಾನಿಸಲಾಗಿದೆ.
    ಉತ್ತಮವಾದ ಯಾವುದೇ ವಿಷಯ ವಸ್ತುವುಳ್ಳ ಕವನಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಮಾ. ೨೨ರೊಳಗೆ ಕಳುಹಿಸಬಹುದಾಗಿದೆ. ಕೆಲವೇ ಕವಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಕವನ ಕಳಿಸಿದ ಆಯ್ಕೆ ಯಾದ ಕವಿಗಳಿಗೆ ಮಾತ್ರ ವಾಚಿಸಲು ಅವಕಾಶ ನೀಡಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ಬಂದು ಕೇಳಿದರೆ ಅವಕಾಶ ಇರುವುದಿಲ್ಲ.
    ಹೆಚ್ಚಿನ ವಿವರಗಳಿಗೆ ಪರಿಷತ್ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಮೊ: ೯೦೦೮೫೧೫೪೩೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪರಿಷತ್ ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ  ಮತ್ತು ಎಂ.ಈ ಜಗದೀಶ್ ಕೋರಿದ್ದಾರೆ.

No comments:

Post a Comment