Friday, May 20, 2022

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಅವಳಿ-ಜವಳಿ ಸಹೋದರಿಯರ ವಿಶಿಷ್ಟ ಸಾಧನೆ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭದ್ರಾವತಿ ಶಂಕರಘಟ್ಟದ ಅವಳಿ-ಜವಳಿ ಸಹೋದರಿಯರು ಫಲಿತಾಂಶದಲ್ಲೂ ವಿಶಿಷ್ಟತೆ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಈ ಸಹೋದರಿಯರನ್ನು ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಮೇ. ೨೦: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವಳಿ-ಜವಳಿ ಸಹೋದರಿಯರು ಫಲಿತಾಂಶದಲ್ಲೂ ವಿಶಿಷ್ಟತೆ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
    ನಗರದ ಬಿ.ಎಚ್ ರಸ್ತೆ ಪೂಜ್ಞ ಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಜಿ. ನಿತ್ಯ ಮತ್ತು ಜಿ. ನಿಧಿ ಇಬ್ಬರು ಸಹ ೬೨೫ಕ್ಕೆ ೬೧೪ ಅಂಕ ಪಡೆದುಕೊಂಡಿರುವುದು ವಿಶೇಷತೆಯಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ತಾಲೂಕಿನ ಶಂಕರಘಟ್ಟದ ದಿವಂಗತ ಎಸ್.ಈ ಗಿರೀಶ್‌ಕುಮಾರ್ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಲತಾ ದಂಪತಿ ಪುತ್ರಿಯರಾಗಿದ್ದು, ಈ ಸಹೋದರಿಯರ ಸಾಧನೆ ಇಡೀ ಗ್ರಾಮದಲ್ಲಿ ಸಂಭ್ರವನ್ನುಂಟು ಮಾಡಿದೆ.
     ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗ ಅಭಿನಂದನೆ :
  ವಿಶಿಷ್ಟ ಸಾಧನೆ ಮೆರೆದಿರುವ ಈ ಸಹೋದರಿಯರನ್ನು ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಬಳಗದ ರಾಜ್ಯಾಧ್ಯಕ್ಷ ಸಿ. ಅನಿಲ್,  ರಾಜ್ಯ ಗೌರವ ಸಲಹೆಗಾರ ತ್ಯಾಗರಾಜ್, ಎಂ. ರಮೇಶ್ ಶಂಕರಘಟ್ಟ, ಶಂಕರ್ ರೈಸ್ ಮಿಲ್ ಮಾಲೀಕ ಎಸ್.ಈ.ನಂದೀಶ್ ಕುಮಾರ್, ಗ್ರಾಮದ ಮುಖಂಡರುಗಳಾದ ಟಿ.ಡಿ ಶಶಿಕುಮಾರ್, ಶ್ರೀಕಾಂತ್, ಮುರುಗನ್, ಮಂಜುನಾಥ್ ಮತ್ತು ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment