Monday, May 23, 2022

ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ : ವಿಜೃಂಭಣೆಯಿಂದ ಜರುಗಿದ ಸಾಮೂಹಿಕ ಉಪನಯನ, ಸಮಾಶ್ರಯಣ

ಭದ್ರಾವತಿ ತಾಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ ಅಂಗವಾಗಿ ಸೋಮವಾರ ಕಾಗದನಗರದ ೭ನೇ ವಾರ್ಡ್‌ನ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು  ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ. ಮೇ. ೧೮; ತಾಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀರಾಮಾನುಜಾಚಾರ್ಯರ ೧೦೦೫ನೇ ಜಯಂತೋತ್ಸವ ಅಂಗವಾಗಿ ಸೋಮವಾರ ಕಾಗದನಗರದ ೭ನೇ ವಾರ್ಡ್‌ನ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು  ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಮೇಲುಕೋಟೆ ಯತೀರಾಜ ಮಠದ ಯಾದಗಿರಿ ಯತೀರಾಜ ನಾರಾಯಣ ಜೀಯರ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸುಮಾರು ೪೦ಕ್ಕೂ ಹೆಚ್ಚು ವಟುಗಳಿಗೆ ಸಮಾಶ್ರಯಣ ನಡೆಯಿತು. ದಾನಿಗಳು, ಸೇವಾಕರ್ತರಾದ ಹೊನ್ನಟ್ಟಿ ಹೊಸೂರಿನ ಉಷಾ ಸತೀಶ್‌ಗೌಡ ದಂಪತಿಯನ್ನು ಶ್ರೀಗಳು ಅಭಿನಂದಿಸಿ ಆಶೀರ್ವದಿಸಿದರು.
    ವೈಷ್ಣವ ಪರಿಷತ್ ಅಧ್ಯಕ್ಷ ದೊಡ್ಡಯ್ಯ, ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ ಅರಳೀಮಠ್, ಜಿ.ವಿ ಅಶ್ವತ್ ನಾರಾಯಣ್, ಎಸ್.ಕೆ ಸುರೇಂದ್ರ, ವೆಂಕಟೇಶ್ ಕನಸಿನಕಟ್ಟೆ, ಚಿನ್ಮಯ, ಮಧುಸೂದನ್ ಹಾಗು ಯುವ ಪುರೋಹಿತರನ್ನು ಶ್ರೀಗಳು ಗೌರವಿಸಿದರು.
    ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ವೈಷ್ಣವ ಸಮಾಜದ ಪ್ರಮುಖರಾದ ಕೃಷ್ಣಸ್ವಾಮಿ, ಅರಹತೊಳಲು ಕೃಷ್ಣಮೂರ್ತಿ, ಕೇಶವಮೂರ್ತಿ, ಕಡದಕಟ್ಟೆ ಮಾದೂರಾವ್, ಹನಗವಾಡಿ ಹನುಮಂತಯ್ಯ, ದೇವರ ಹೊನ್ನಾಳಿ ಗೋಪಾಲಯ್ಯ, ದೇವರಹಳ್ಳಿ ಕೇಶವಯ್ಯ, ಎಸ್.ಪಿ ಅಶ್ವತ್‌ನಾರಾಯಣ್, ಪತ್ರಕರ್ತ ಎಸ್.ಕೆ ಗಜೇಂದ್ರಸ್ವಾಮಿ, ಬಿ. ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

No comments:

Post a Comment