Sunday, June 5, 2022

ಅಗ್ನಿಶಾಮಕ ಠಾಣೆಯಲ್ಲಿ ವಿಶ್ವ ಪರಿಸರ ದಿನ



ಭದ್ರಾವತಿ: ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಪ್ರಮುಖ ಅಗ್ನಿಶಾಮಕ ಬಾಬು ಎಸ್ ಗೌಡ, ಅಗ್ನಿಶಾಮಕ ಚಾಲಕ ಜಿ.ಟಿ ಶ್ರೀನಿವಾಸ್, ಅಗ್ನಿಶಾಮಕರಾದಂತಹ ವಿನೂತನ್, ಕರಿಯಣ್ಣ, ಹರೀಶ್, ರಾಜ ನಾಯ್ಕ್, ಹೊಸಳ್ಳಿ ತಿಪ್ಪೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



No comments:

Post a Comment