Friday, July 22, 2022

ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ




ಎನ್. ವೈಷ್ಣವಿ ಕಾಮತ್(೪೮೫)


ಎಂ. ಪ್ರಜ್ವಲ್ (೪೬೩)


ಪಿ.ವಿ ಲಹರಿ (೪೬೧)


ತೇಜಸ್ವಿನಿ ಗೌಡ(೪೫೫)


ಮೇಘನಾ ಎಂ. ರೆಡ್ಡಿ (೪೫೨)


ಆರ್. ಹೇಮಾಲತಾ(೪೫೨)
    ಭದ್ರಾವತಿ, ಜು. ೨೨: ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಜ್ಞಾನಪೀಠ ಶಾಲೆ ಈ ಬಾರಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
    ಶಾಲೆಯ ವಿದ್ಯಾರ್ಥಿನಿ ಎನ್. ವೈಷ್ಣವಿ ಕಾಮತ್ ೫೦೦ಕ್ಕೆ ೪೮೫ ಅತಿ ಹೆಚ್ಚು ಶೇ.೯೭ ಅಂಕ ಪಡೆದುಕೊಂಡಿದ್ದು,  ಉಳಿದಂತೆ ಎಂ. ಪ್ರಜ್ವಲ್ ೫೦೦ಕ್ಕೆ ೪೬೩ ಶೇ.೯೨.೬, ಪಿ.ವಿ ಲಹರಿ ೫೦೦ಕ್ಕೆ ೪೬೧ ಶೇ.೯೨.೨, ತೇಜಸ್ವಿನಿ ಗೌಡ ೫೦೦ಕ್ಕೆ ೪೫೫ ಶೇ.೯೧, ಮೇಘನಾ ಎಂ. ರೆಡ್ಡಿ ೫೦೦ಕ್ಕೆ ೪೫೨ ಶೇ.೯೦.೪ ಹಾಗು ಆರ್. ಹೇಮಾಲತಾ ೫೦೦ಕ್ಕೆ ೫೫೨ಕ್ಕೆ ಶೇ.೯೦.೪ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
    ಒಟ್ಟು ೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ವಿದ್ಯಾರ್ಥಿಯಾಗಿದ್ದಾರೆ. ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್, ಉಪಪ್ರಾಂಶುಪಾಲ ಪ್ರಸನ್ನ ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

No comments:

Post a Comment