ಭದ್ರಾವತಿ ತಾಲೂಕು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷರಾಗಿ ಆನೇಕೊಪ್ಪ ಎಂಪಿಎಂ ಬಡಾವಣೆಯ ಸಂತೋಷ್ ಶಾಮಿಯಾನ ಮಾಲೀಕ ಹಾಗು ಬಿಜೆಪಿ ಪಕ್ಷದ ಯುವ ಮುಖಂಡ ಸಂತೋಷ್ ೨ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ, ಆ. ೨೫: ತಾಲೂಕು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷರಾಗಿ ಆನೇಕೊಪ್ಪ ಎಂಪಿಎಂ ಬಡಾವಣೆಯ ಸಂತೋಷ್ ಶಾಮಿಯಾನ ಮಾಲೀಕ ಹಾಗು ಬಿಜೆಪಿ ಪಕ್ಷದ ಯುವ ಮುಖಂಡ ಸಂತೋಷ್ ೨ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂತೋಷ್ ಸಂಘದ ಅಧ್ಯಕ್ಷರಾಗಿ ಮೊದಲ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ೨ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೋಷ್ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಲವಾರು ಸಮಾಜಮುಖಿ ಸೇವಾಕಾರ್ಯಗಳನ್ನು ಕೈಗೊಂಡಿದ್ದಾರೆ.
ಉಳಿದಂತೆ ಸಂಘದ ಉಪಾಧ್ಯಕ್ಷರಾಗಿ ಎಸ್ವಿಎಸ್ ಶಾಮಿಯಾನದ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸನ್ನಿ ಡಿಸೋಜ, ಸಹಕಾರ್ಯದರ್ಶಿಯಾಗಿ ಹೆಬ್ಬಂಡಿ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಶಾಮಿಯಾನದ ರವಿ, ಖಜಾಂಚಿಯಾಗಿ ಹಳೇನಗರದ ವಿನಾಯಕ ಸೌಂಡ್ಸ್ನ ಶಾಮಣ್ಣ ಹಾಗು ಗೌರವಾಧ್ಯಕ್ಷರಾಗಿ ನೂರ್ ಶಾಮಿಯಾನದ ಅಸ್ಲಾಂ ಮತ್ತು ನಿರ್ದೇಶಕರಾಗಿ ಕೂಡ್ಲಿಗೆರೆ ಸಾಜನ್ ಶಾಮಿಯಾನದ ಅಕ್ಬರ್ ಸಾಬ್, ಚಂದ್ರಾಲಯದ ರಮೇಶ್(ಸುರಗಿತೋಪು), ಬೀರೇಶ್ವರ ಶಾಮಿಯಾನದ ಸಂಜು, ಪಾರ್ವತಿ ಶಾಮಿಯಾನದ ಮಹದೇವ, ಬಿಆರ್ಪಿ ಶಾಮಿಯಾನದ ಯಲ್ಲಪ್ಪ, ಬಾರಂದೂರು ಬಿಎಂಕೆ ಶಾಮಿಯಾನದ ಕುಮಾರ್, ಜೆಎಂಜೆ ಶಾಮಿಯಾನದ ಬ್ಯಾಪ್ಟಿಸ್ಟ್, ಲೈಟಿಂಗ್ಸ್ ರಮೇಶ್(ಸೀಗೆಬಾಗಿ) ಮತ್ತು ಉಜ್ಜನಿಪುರ ವೆಂಕಟೇಶ್ವರ ಸೌಂಡ್ಸ್ನ ಶ್ರೀನಿವಾಸ್ ಸೇರಿದಂತೆ ಒಟ್ಟು ೧೨ ಜನ ಆಯ್ಕೆಯಾಗಿದ್ದಾರೆ.
No comments:
Post a Comment