Monday, October 17, 2022

ತಮ್ಮಡಿಹಳ್ಳಿ ಗ್ರಾಮದ ಮಂಡಲ ಪ್ರಧಾನ ಡಿ.ಕೆ ಗೋಪಾಲಪ್ಪ ನಿಧನ

   ಡಿ.ಕೆ ಗೋಪಾಲಪ್ಪ
     ಭದ್ರಾವತಿ, ಅ. ೧೭ : ತಮ್ಮಡಿಹಳ್ಳಿ ಗ್ರಾಮದ ಮಂಡಲ ಪ್ರಧಾನರು ಹಾಗು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಡಿ.ಕೆ ಗೋಪಾಲಪ್ಪ(೯೯) ಸೋಮವಾರ ನಿಧನ ಹೊಂದಿದರು.
    ಗ್ರಾಮದಲ್ಲಿಯೇ ಗೋಪಾಲಪ್ಪ ಹಿರಿಯ ವ್ಯಕ್ತಿಯಾಗಿದ್ದು, ೩ ಗಂಡು, ೬ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ ವರ್ಷ ಗ್ರಾಮದ ಮಂಡಲ ಪ್ರಧಾನರಾಗಿ ಹಾಗು ಸುಮಾರು ೪೦ ವರ್ಷ ಮಲೆಶಂಕರ ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ತಮ್ಮಡಿಹಳ್ಳಿ ಗ್ರಾಮಸ್ಥರು ಹಾಗು ಕೇಸರಿಪಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment