ಭದ್ರಾವತಿ, ಏ. ೫ : ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಸುಮಾರು ೬ ಸಾವಿರ ರು. ಮೌಲ್ಯದ ಒಟ್ಟು ೧೫೦ ಗ್ರಾಂ. ಒಣ ಗಾಂಜಾ ಹಾಗು ೫೩೦ ರು. ನಗದು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಸತ್ಯಸಾಯಿ ನಗರದ ನಿವಾಸಿ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್(೬೬) ಬಂಧಿತ ವ್ಯಕ್ತಿಯಾಗಿದ್ದು, ಈತ ಮಂಗಳವಾರ ಮಧ್ಯಾಹ್ನ ಸತ್ಯಸಾಯಿ ನಗರದ ನೀರಿನ ಟ್ಯಾಂಕ್ ಹತ್ತಿರ ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿಂಗಪ್ಪ ಕರಕಣ್ಣನವರ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಈ ಸಂಬಂಧ ಬಂಧಿತ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
No comments:
Post a Comment