Friday, June 9, 2023

ಕಾಲುದಾರಿ, ಸೈಕಲ್ ಟ್ರಾಕ್ ನಿರ್ಮಿಸುವ ಬದಲು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುತ್ತಿರುವುದು.
    ಭದ್ರಾವತಿ, ಜೂ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುವ ಬದಲು ದ್ವಿಚಕ್ರ ಮತ್ತು ಲಘು ವಾಹನ(ಕಾರು)ಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನೆ ಮಾಲೀಕರ ಸಂಘ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
    ರಸ್ತೆಯ ಎರಡು ಕಡೆ ಚರಂಡಿಗಳ ಸ್ಲಾಬ್ ಎತ್ತರ ಮಾಡಿ ಟ್ರಾಕ್ ನಿರ್ಮಿಸುತ್ತಿರುವುದಾಗಿ ತಿಳಿದುಬಂದಿದ್ದು, ಇದು ಸರಿಯಾದುದಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯಲ್ಲಿ ಒಂದು ಬದಿಯಲ್ಲಿ ೩-೪ ಶಾಲೆಗಳಿವೆ ಇವು ತೆರೆದಿರುತ್ತವೆ. ಇನ್ನೊಂದು ಬದಿಯಲ್ಲಿ ಕನಕಮಂಟಪದ ಎರಡು ದ್ವಾರಗಳು, ಚಿತ್ರಮಂದಿರ, ಲಾರಿ ಕಛೇರಿ ಇದ್ದು, ಇವುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ಸೈಕಲ್ ಟ್ರಾಕ್ ನಿರ್ಮಾಣ ಮಾಡಿದ್ದಲ್ಲಿ ಅದು ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ಕೈಗೊಂಡ ಕಾಮಗಾರಿಯ ಹಣ ವ್ಯಯವಾಗಲಿದೆ ಎಂದು ಮನವರಿಕೆ ಮಾಡಲಾಗಿದೆ.
    ರಸ್ತೆಯ ಎರಡೂ ಬದಿ ಇರುವ ಚರಂಡಿಯ ಮೇಲ್ಗಡೆ ಅದೇ ಮಟ್ಟದಲ್ಲಿ ಸ್ಲಾಬ್ ಹಾಕಿಸಿ ದ್ವಿಚಕ್ರ ಮತ್ತು ಲಘುವಾಹನ(ಕಾರು)ನಿಲ್ಲಿಸುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೋರಲಾಗಿದೆ.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಕಾರ್ಯದರ್ಶಿ ಎನ್. ರಘುನಾಥರಾವ್ ಹಾಗು ಪದಾಧಿಕಾರಿಗು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

No comments:

Post a Comment