ಭದ್ರಾವತಿ, ಜು. ೨೭: ಮನೆಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀರಾಮನಗರದ ನಿವಾಸಿ ಮಂಜುಳಾರವರ ಮನೆಯಲ್ಲಿ ಜು.೧೩ರಂದು ಕಳವು ಘಟನೆ ನಡೆದಿದೆ. ಅಂದು ಮಂಜುಳಾ ಹಾಗು ಇವರ ಪತಿ ಇಬ್ಬರೂ ಕೆಲಸಕ್ಕೆ ತೆರಳಿದ್ದು, ಮಗಳು ಕಾಲೇಜಿಗೆ ಹೋಗಿದ್ದು, ಮನೆಯಲ್ಲಿ ಇವರ ಅತ್ತೆ ಮಾತ್ರ ಇರುತ್ತಾರೆ.
ಸಂಜೆ ಮನೆಗೆ ಬಂದು ಬೀರು ನೋಡಲಾಗಿದ್ದು, ಲಾಕರ್ನಲ್ಲಿ ಇಡಲಾಗಿದ್ದ ಸುಮಾರು ೮೯,೦೦೦ ರು. ಮೌಲ್ಯದ ಆಭರಣ ಹಾಗು ೮,೦೦೦ ರು. ನಗದು ಕಳುವಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಂಜುಳಾರವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment