Wednesday, August 2, 2023

ನೂತನ ಅಧ್ಯಕ್ಷ ಎಸ್. ಕುಮಾರ್‌ಗೆ ಕ್ರೈಸ್ತ ಮುಖಂಡರಿಂದ ಅಭಿನಂದನೆ

ಭದ್ರಾವತಿ ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಭದ್ರಾವತಿ, ಆ. ೨ :  ತಾಲೂಕು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಕುಮಾರ್ ರವರನ್ನು ಬುಧವಾರ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದೊಂದಿಗೆ ಕ್ರೈಸ್ತ ಮುಖಂಡರು ಅಭಿನಂದಿಸಿದರು.
    ಪಕ್ಷ ಸಂಘಟನೆ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗು ಅನ್ಯಾಯ, ಶೋಷಣೆ ವಿರುದ್ಧ ಹೋರಾಟ ನಡೆಸುವ ಮೂಲಕ ಜನಸಾಮಾನ್ಯರ ಧ್ವನಿಯಾಗುವಂತೆ ಅಭಿನಂದಿಸಿ ಕ್ರೈಸ್ತ ಸಮುದಾಯದವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಸೆಲ್ವಾರಾಜ್, ನಗರ ಸಭೆ ಮಾಜಿ ಸದಸ್ಯ ಫ಼್ರಾನ್ಸಿಸ್, ದಾಸ್, ಐ.ವಿ ಸಂತೋಷ್, ಸಂಪತ್, ಅಂತೋಣಿ ವಿಲ್ಸನ್, ಶಾಮ್, ಲಾರೆನ್ಸ್ ಪೊಲ್ ಸೇರಿದಂತೆ ಕ್ರೈಸ್ತ ಸಮುದಾಯದ ಮುಖಂಡರು  ಉಪಸ್ಥಿತರಿದ್ದರು.

No comments:

Post a Comment