Wednesday, August 23, 2023

ಡಾ. ಅಮದಾ ಸಿ. ಮುನಿರಾಜ್‌ಗೆ ಪಿಎಚ್‌ಡಿ : ಬಿಜಿಎಸ್‌ ಆಡಳಿತ ಮಂಡಳಿ ಸನ್ಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಭದ್ರಾವತಿ, ಆ. ೨೩ : ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಡಾ. ಅಮದಾ ಸಿ. ಮುನಿರಾಜ್‌ರವರು ಹಲವಾರು ವರ್ಷಗಳಿಂದ ವಿದ್ಯಾಲಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಡುವೆ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಿ  ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
    ಆಡಳಿತ ಅಧಿಕಾರಿ ಬಿ. ಜಗದೀಶ, ಉಪಪ್ರಾಂಶುಪಾಲ ಎಂ.ಎಂ ವೀರರಾಜೇಂದ್ರ ಸ್ವಾಮಿ, ಮುಖ್ಯೋಪಾಧ್ಯಾಯಿನಿ ಕೆ.ಎನ್ ದಿವ್ಯ,ವಾಹನ ವ್ಯವಸ್ಥಾಪಕ ಸೋಮಶೇಖರ್  ಸೇರಿದಂತೆ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

No comments:

Post a Comment