Thursday, September 28, 2023

ಟಾರ್ಪಲ್ ನಲ್ಲಿ ಮುಚ್ಚಿಟ್ಟಿದ್ದ ಅಡಕೆ ಕಳವು

    ಭದ್ರಾವತಿ: ಬೇಯಿಸಿ ಒಣಗಲು ಟಾರ್ಪಲ್‌ ನಲ್ಲಿ ಹರಡಿ ಮುಚ್ಚಿಟ್ಟಿದ್ದ ಅಡಕೆಯನ್ನು ಕಳವು ಮಾಡಿರುವ ಘಟನೆ ಹಳೇ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ಸುರೇಶ್ ಎಂಬುವರು ಸುಮಾರು 5 ಕ್ವಿಂಟಲ್ ಅಡಕೆ ರಾಶಿಯನ್ನು ರಾತ್ರಿ ಟಾರ್ಪಲ್ ನಲ್ಲಿ ಹರಡಿ ಮುಚ್ಚಿಟ್ಟಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಯಾರೋ ಟಾರ್ಪಲ್ ಸರಿಸಿ ಅಡಕೆ ರಾಶಿಯಲ್ಲಿ ಸುಮಾರು 12 ಸಾವಿರ ರು. ಮೌಲ್ಯದ 25 ಕೆ.ಜಿಯಷ್ಟು ಅಡಕೆಯನ್ನು ತುಂಬಿಕೊಂಡು ಹೋಗಿರುತ್ತಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

No comments:

Post a Comment