ಎಸ್.ಎಸ್ ಸುಮಿತ್ರ
ಭದ್ರಾವತಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ಅಧ್ಯಕ್ಷೆ, ಸಾಹಿತಿ, ನಿವೃತ್ತ ಉಪನ್ಯಾಸಕಿ ಎಮೆರಿಟಸ್ ಡಾ. ವಿಜಯದೇವಿಯವರ ಅತ್ತಿಗೆ ಎಸ್.ಎಸ್ ಸುಮಿತ್ರ(೭೨) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದರು. ಸುಮಿತ್ರಮ್ಮ ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಎಸ್.ಜಿ ಶಿವಶಂಕರಯ್ಯ ಅಂಡ್ ಸನ್ಸ್ ಪೆಟ್ರೋಲ್ ಬಂಕ್ ಮಾಲೀಕ ದಿವಂಗತ ಎಸ್.ಎಸ್ ಶಿವಾನಂದ್ರವರ ಪತ್ನಿಯಾಗಿದ್ದಾರೆ. ಹಳೇನಗರದ ಎಸ್.ಎಸ್.ಕೆ ಬಡಾವಣೆಯಲ್ಲಿ ವಾಸವಾಗಿದ್ದರು.
ಇವರ ಅಂತ್ಯಕ್ರಿಯೆ ಸಂಜೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಸುಮಿತ್ರಮ್ಮನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಎಸ್.ಎಸ್ ಕುಮಾರಸ್ವಾಮಿ ಹಾಗು ಸಹೋದರರು ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment