Friday, December 6, 2024

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರಸಭೆಗೆ ಮನವಿ

 

ಭದ್ರಾವತಿ: ಜನ್ನಾಪುರ ಮತ್ತು ಹುತ್ತಾ ಕಾಲೋನಿ ವ್ಯಾಪ್ತಿಯಲ್ಲಿನ ನಾಗರಿಕರ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. 
    ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟಾಯ್ಲೆಟ್ ಪಿಟ್‌ಗಳು (ಶೌಚಾಲಯ ಗುಂಡಿಗಳು) ತುಂಬಿ ತುಳುಕುತ್ತಿವೆ. ತಕ್ಷಣವೇ ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವುದು. ಮೀಟರ್ ಅಳವಡಿಕೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸರಿಯಾಗಿ ಬಾರದೆ ತೊಂದರೆಯುಂಟಾಗಿದೆ ತಕ್ಷಣ ಸರಿಪಡಿಸುವುದು. ಜನ್ನಾಪುರ ಕೆರೆ ಶುದ್ದೀಕರಣ ಕಾರ್ಯ ತ್ವರಿತವಾಗಿ ಕೈಗೊಳ್ಳುವುದು. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀದಿ ನಾಯಿಗಳ ಹಾವಳಿ, ಸೊಳ್ಳೆಕಾಟ, ಬಿಡಾಡಿ ದನಗಳ ಕಾಟ ಹೆಚ್ಚಾಗಿವೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. 
    ಕಂದಾಯ ಪಾವತಿಸಲು ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗ ತೆರೆಯುವುದು. ಕಸ ತೆಗೆಯುವಾಗ ವಯೋವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆದ್ಯತೆ ನೀಡಿ ತಂದಿಟ್ಟ ಕಸವನ್ನು ತೆಗೆಯಲು ಸಹಕರಿಸುವುದು ಹಾಗು ಕಳಪೆ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ. 

No comments:

Post a Comment