Tuesday, January 14, 2025

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಜಿ. ರಮೇಶ್

ಜಿ. ರಮೇಶ್ 
    ಭದ್ರಾವತಿ:  ತಾಲೂಕು ಬ್ರಾಹ್ಮಣ ಮಹಾಸಭಾ ನೂತನ ಅಧ್ಯಕ್ಷರಾಗಿ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಉದ್ಯೋಗಿ ಜಿ. ರಮೇಶ್ ಆಯ್ಕೆಯಾಗಿದ್ದಾರೆ. 
    ಸಿದ್ಧಾರೂಢನಗರದ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷರಾಗಿ ಜಿ. ರಮೇಶ್ 
    ಉಪಾಧ್ಯಕ್ಷರಾಗಿ ಎಸ್.ಸಿ ನೀಲಕಂಠ ಜೋಯ್ಸ್ ಮತ್ತು  ರಾಜಶೇಖರ್(ಬಿಆರ್‌ಪಿ), ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮಂಜುನಾಥ್, ಸಹ ಕಾರ್ಯದರ್ಶಿಯಾಗಿ ಬಿ.ಆರ್ ಇಂದ್ರಸೇನಾ ರಾವ್, ಖಜಾಂಚಿಯಾಗಿ ಎಸ್. ಶೇಷಾದ್ರಿ ಹಾಗು ಸಂಘಟನಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. 

No comments:

Post a Comment