ಸೋಮವಾರ, ಮಾರ್ಚ್ 31, 2025

ಸಡಗರ ಸಂಭ್ರಮದ ಯುಗಾದಿ : ಚಂದ್ರ ದರ್ಶನ

ಭದ್ರಾವತಿ : ಹಿಂದೂ ವರ್ಷಾಚರಣೆ ಆರಂಭದ ದಿನ, ವರ್ಷದ ಮೊದಲ ಹಬ್ಬ ಯುಗಾದಿ ಬೇವು-ಬೆಲ್ಲ ಸವಿಯುವ ಮೂಲಕ ನಗರದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಸಂಜೆ ಚಂದ್ರನ ದರ್ಶನ ಮಾಡುವ ಮೂಲಕ ಚಂದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಭದ್ರಾವತಿ : ಹಿಂದೂ ವರ್ಷಾಚರಣೆ ಆರಂಭದ ದಿನ, ವರ್ಷದ ಮೊದಲ ಹಬ್ಬ ಯುಗಾದಿ ಬೇವು-ಬೆಲ್ಲ ಸವಿಯುವ ಮೂಲಕ ನಗರದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 
    ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಮನೆಗಳಲ್ಲಿ ಮುಂಜಾನೆಯೇ ಎದ್ದು ಮಾವು-ಬೇವಿನ ತಳಿರು ತೋರಣಗಳಿಂದ ಅಲಂಕರಿಸಿ ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಹೊಸ ಹೊಸ ಉಡುಗೆ ತೊಡುಗೆಗಳೊಂದಿಗೆ ದೇವರಿಗೆ ಪೂಜೆ ಸಲ್ಲಿಸಿ ಬೇವು-ಬೆಲ್ಲ ಸವಿಯುವುದು ವಾಡಿಕೆಯಾಗಿದೆ. 
    ನಂತರ ಹೋಳಿಗೆ, ಪಾಯಸ ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಾರೆ. ಕುಟುಂಬರಸ್ಥರು, ಬಂದು-ಬಳಗದವರು ಹಬ್ಬಕ್ಕೆ ಬಂದು ಹೋಗುವುದು ವಿಶೇಷವಾಗಿದೆ. 
    ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು. ವಿಶೇಷವಾಗಿ ಯುಗಾದಿ ಹಬ್ಬ ಅದರಲ್ಲೂ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ. 
    ಸೋಮವಾರ ಸಂಜೆ ಚಂದ್ರನ ದರ್ಶನ ಮಾಡುವ ಮೂಲಕ ಹಬ್ಬದ ವಿಶೇಷತೆಗಳಲ್ಲಿ ಒಂದಾದ ಚಂದ್ರ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆವಾಗಿದೆ. ಮಂಗಳವಾರ ಸಂಪ್ರದಾಯದಂತೆ ಮಾಂಸ ಆಹಾರ ಸೇವನೆ ಸಹ ಹಬ್ಬದ ಒಂದು ಭಾಗವಾಗಿದ್ದು, ಅಂತಿಮವಾಗಿ ಯುಗಾದಿ ಮುಕ್ತಾಯಗೊಳ್ಳಲಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ