Friday, April 4, 2025

ವಿಜೃಂಭಣೆಯಿಂದ ಜರುಗಿದ ಭೂತನಗುಡಿ ಜಾತ್ರಾ ಮಹೋತ್ಸವ : ಜನರ ಮೆಚ್ಚುಗೆ ಪಡೆದ ಪೌರಾಣಿಕ ನಾಟಕ ಪ್ರದರ್ಶನ

ಭದ್ರಾವತಿ ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಭದ್ರಾವತಿ : ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಚನ್ನರಾಯಪಟ್ಟಣದ ಮಂಜುನಾಥ ಡ್ರಾಮಾ ಸೀನ್ ಸಪ್ಲೈಯರ್ ಇವರ ಭವ್ಯ ರಂಗ ವೇದಿಕೆಯಲ್ಲಿ ಬುಧವಾರ ರಾತ್ರಿ  ಶನೇಶ್ವರ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕದಲ್ಲಿ ಸ್ಥಳೀಯ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.  
    ಕಲಾವಿದರಾದ ಮಂಜುನಾಥ-ಶನಿದೇವರು, ಯ.ಎ ಕೃಷ್ಣಕುಮಾರ್-ವಿಕ್ರಮರಾಜ, ಮುಕೇಶ್-ಕಾರನಾಸ ಮುಲ್ಡ್ ಗುಣವಂತಿ ಗಂಡ ಸಿದ್ದಲಿಂಗು, ಶರತ್ ಕುಮಾರ್-ಸೇನಾಧಿಪತಿ ಸೂರ್ಯಗ್ರಹ ಡಂಗೂರ, ತಮ್ಮಣ್ಣ-ಬಡ ಬ್ರಾಹ್ಮಣ, ಗುಣವಂತಿ ಮುಲ್ಡಿ, ಲಕ್ಷ್ಮೀದೇವಿ, ಅರ್ಜುನ್-ಗುರುಗ್ರಹ, ಯಜಮಾನ ಬಸಪ್ಪ ತೇಲಿ ಶೆಟ್ಟಿ ಕಟಕ, ಸಂಜು ಎಂ.ಆರ್-ನಟಿ, ಕಾಳಿಕಾಂಬೆ ಕಟುಕ ಸಿಪಾಯಿ, ನತೀನ್ ಕುಮಾರ-ಶನಿಗ್ರಹ, ಕಳ್ಳ, ಕು. ವ್ಯಾಪಾರಿ, ಎಸ್. ಕಿರಣ್ ಅಂಬೇಕರ್-ಚಂದ್ರಸೇನ, ರಾಹು-ಕೇತು ಗ್ರಹ, ಆನಂದ-ಆದಿಮೂರ್ತಿ, ಕು.ವ್ಯಾಪಾರಿ, ಸುನೀಲ್ ಕುಮಾರ್-ಚಂದ್ರಗ್ರಹ ಚ. ಸೇನಾಧಿಪತಿ, ಪ್ರದೀಪ್ ಕುಮಾರ್-ನಂದಯ್ಯ ಶೆಟ್ಟಿ, ಅರುಣ್ ಕುಮಾರ್-ಬುಧಗ್ರಹ ಸಿಪಾಯಿ, ಅಭಿಲಾಷ್ ಜಿ.ಆರ್-ವಿಕ್ರಮ ಮಂತ್ರಿ, ಅಮೃತ್ ಜಿ.ಆರ್-ಶುಕ್ರಗ್ರಹ, ಎ. ದಯಾನಂದ-ಪದ್ಯಾವತಿ, ಸಚಿತ್ .ಎ-ಚ. ಮಂತ್ರಿ, ನಂಜುಂಡ-ಸುಮತಿ, ಅಲೋಲಿಕೆ, ಗೋಪಿ-ಕಟುಕ ಬೇಟೆಗಾರ, ಚಂದು-ಅ.ಪ ಸಖಿ, ಭುವನ್. ಆರ್-ಬಡ ಬ್ರಾಹ್ಮಣ ಮಗ ಮತ್ತು ನಿಖಿಲ್-ಬಡ ಬ್ರಾಹ್ಮಣ ಮಗಳು ಅ.ಪ ಸಖಿ ಪಾತ್ರಗಳಲ್ಲಿ ಅಭಿನಯಿಸಿದರು. 
    ಶ್ರೀ ಮಹಾಗಣಪತಿ, ಶ್ರೀ ಶನೈಶ್ವರ ಸ್ವಾಮಿ, ಶ್ರೀ ಕೆಂಚಮ್ಮ ದೇವಿ ಮತ್ತು ಭೂತಪ್ಪ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕಳೆದ ೪೦ ವರ್ಷಗಳಿಂದಲೂ ಸ್ಥಳೀಯ ಭೂತನಗುಡಿ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ವಯಸ್ಸಿನವರು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.  ಆಧುನಿಕ ಯುಗದ ಟಿ.ವಿ ಮಾಧ್ಯಮಗಳ  ಭರಾಟೆಯಲ್ಲಿ ರಂಗ ಪ್ರದರ್ಶನ ನಶಿಸುತ್ತಿದ್ದು, ಈ ರೀತಿಯ ನಾಟಕ ಪ್ರದರ್ಶನಗಳು ರಂಗಕರ್ಮಿಗಳನ್ನು ಉತ್ತೇಜಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ರಾಜೇಶ್ ನಾಟಕ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  
    ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ಸ್ಥಳೀಯ ನಿವಾಸಿಗಳು ನಾಟಕ ಪ್ರದರ್ಶನ ವೀಕ್ಷಿಸುವ ಮೂಲಕ ಪ್ರೋತ್ಸಾಯಿಸಿದರು. 

No comments:

Post a Comment