ಅಮೇರಿಕಾ ದೇಶದ ಮಧ್ಯಸ್ಥಿಕೆ ಭಾರತ ದೇಶಕ್ಕೆ ಅಗತ್ಯವಿಲ್ಲ
ಜಿ. ಧರ್ಮಪ್ರಸಾದ್, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಲ, ಭದ್ರಾವತಿ
ಭದ್ರಾವತಿ : ಭಾರತ ದೇಶ ಪಾಕಿಸ್ತಾನದ ಮೇಲೆ ಯುದ್ಧ ನಡೆಸಿಲ್ಲ. ಈಗಲೂ ಸಹ ಯುದ್ಧ ನಡೆಸಲು ಬಯಸಲ್ಲ. ಭಯೋತ್ಪಾದಕನ್ನು ನಿರ್ಮೂಲನೆ ಮಾಡುವುದು ಭಾರತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆ ಯುದ್ಧದ ರೂಪಕ್ಕೆ ಬದಲಾಗಿದೆ. ಈ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವುಗಳು ಈ ದೇಶದ ಜನರ ನಿಲುವುಗಳಾಗಿವೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ಕೈಗೊಂಡ ನಿಲುವುಗಳಲ್ಲ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯುದ್ಧ ಕುರಿತು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಯುದ್ಧದ ಸ್ಪಷ್ಟನೆ ಅರಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಭಾರತ ದೇಶ ಭಯೋತ್ಪಾದಕರು ಹಾಗು ಅವರ ಉಗ್ರ ಚಟುವಟಿಕೆಗಳ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಅದು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಈ ವಿಚಾರ ನೇರವಾಗಿ ಭಾರತ ದೇಶ ಪಾಕಿಸ್ತಾನ ತಿಳಿಸಿದೆ. ಆದರೂ ಸಹ ವಿನಾಃಕಾರಣ ಭಾರತ ದೇಶದ ಮೇಲೆ ಯುದ್ದ ನಡೆಸಿದೆ. ಮೇಲ್ನೋಟಕ್ಕೆ ಕದನ ವಿರಾಮ ಎಂದು ಘೋಷಿಸಲಾಗಿದೆಯಾದರೂ ಈ ಯುದ್ಧ ಈಗಲೂ ನಿಂತಿಲ್ಲ ಮುಂದುವರೆಯುತ್ತಿದೆ ಎಂದರು.
ಪಾಕಿಸ್ತಾನದ ಮೇಲೆ ಯುದ್ದ ನಿಲ್ಲಿಸಲು ಭಾರತ ಯುದ್ಧ ಆರಂಭಿಸಿಲ್ಲ. ಪಾಕಿಸ್ತಾನವೇ ಯುದ್ಧ ಆರಂಭಿಸಿ ಇದೀಗ ಕದನ ವಿರಾಮಕ್ಕೆ ಮನವಿ ಮಾಡಿದೆ. ಇದಕ್ಕೆ ಭಾರತ ದೇಶ ಸ್ಪಂದಿಸಿದೆ. ಪಾಕಿಸ್ತಾನ ಯುದ್ದ ನಿಲ್ಲಿಸಿದರೆ ಭಾರತವೂ ಯುದ್ಧ ನಿಲ್ಲಿಸುತ್ತದೆ. ಇದು ಸತ್ಯವಾದ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಅಮೇರಿಕಾ ದೇಶದ ಮಧ್ಯಸ್ಥಿಗೆಯಿಂದ ಭಾರತ ದೇಶ ಯುದ್ಧ ನಿಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಕಾಶ್ಮೀರದ ವಿಚಾರವಾಗಲಿ ಅಥವಾ ಯುದ್ಧದ ವಿಚಾರವಾಗಲಿ ಸೂಕ್ತ ನಿರ್ಣಯ ಕೈಗೊಳ್ಳುವ ಶಕ್ತಿ ಭಾರತ ದೇಶ ಹೊಂದಿದೆ. ಪ್ರಸ್ತುತ ಭಾರತ ದೇಶ ಕೈಗೊಂಡಿರುವ ಎಲ್ಲಾ ನಿಲುವುಗಳು ಪರಿಪೂರ್ಣವಾಗಿವೆ, ಸ್ಪಷ್ಟತೆಯಿಂದ ಕೂಡಿವೆ ಎಂದರು.
ಯುದ್ಧದ ಸಂದರ್ಭದಲ್ಲಿ ದೇಶದ ಜನರು ಸಾರ್ವಭೌಮತೆಯನ್ನು ಬೆಂಬಲಿಸಬೇಕಾಗಿದೆ. ದೇಶದ ಆಡಳಿತ ನಡೆಸುವ ಸರ್ಕಾರ ಹಾಗು ಅದರ ನೇತೃತ್ವ ವಹಿಸಿರುವ ನಾಯಕನನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಇಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ನಾಯಕನ ಹಿಂಬಾಲಕರಾಗಬೇಕು ಅಷ್ಟೆ. ಇದರ ಯಶಸ್ಸು ಸರ್ಕಾರ ಮತ್ತು ನಾಯಕನಿಗೆ ಸಲ್ಲುತ್ತದೆ. ಅಂದರೆ ಇಡೀ ದೇಶದ ಜನರಿಗೆ ಸಲ್ಲುತ್ತದೆ ಹೊರತು. ಯಾವುದೋ ಪಕ್ಷಕ್ಕೆ ಅಥವಾ ಸಂಸ್ಥೆಗೆ ಸಲ್ಲುವುದಿಲ್ಲ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕೆಂದರು.
No comments:
Post a Comment