Thursday, June 19, 2025

ಜೂ.೨೨ರಂದು ಹಿಂದುತ್ವ ಪುಸ್ತಕ ಕುರಿತು ಸಂವಾದ

    ಭದ್ರಾವತಿ: ಮಂಥನ ಭದ್ರಾವತಿ ವತಿಯಿಂದ ಹಿಂದುತ್ವ ಪುಸ್ತಕದ ಕುರಿತು ಸಂವಾದ ಜೂ.೨೨ರಂದು ಸಂಜೆ ೬ ಗಂಟೆಗೆ ಹಳೇನಗರದ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ, ಹವ್ಯಾಸಿ ಲೇಖಕ ಶೈಲೇಶ್ ಕುಲಕರ್ಣಿ ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್ ಉಪಸ್ಥಿತರಿರುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಂಥನ ಭದ್ರಾವತಿ ತಂಡದವರು ಕೋರಿದ್ದಾರೆ. 

No comments:

Post a Comment