Thursday, June 26, 2025

ರಾಜ್ಯದಲ್ಲಿ ಅಹಿಂದ ಒಗ್ಗೂಡಿದಾಗ ಹೆಚ್ಚಿನ ಬಲ : ಮಹಮದ್ ಸನಾವುಲ್ಲಾ

ಭದ್ರಾವತಿ ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಮಾತನಾಡಿದರು. 
    ಭದ್ರಾವತಿ : ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗು ದಲಿತರು ಒಗ್ಗೂಡಿದಾಗ ಹೆಚ್ಚಿನ ಬಲ ಬರಲಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಹೇಳಿದರು. 
    ಅವರು ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ತಮ್ಮ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಮಾತನಾಡಿದರು. 
    ರಾಜ್ಯದಲ್ಲಿ ಅಹಿಂದ ಸಂಘಟಿಸುವ ಉದ್ದೇಶದಿಂದ ಅಹಿಂದ ನಾಯಕರು ಒಗ್ಗಟ್ಟಾಗಿ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಹುಟ್ಟುಹಬ್ಬದಲ್ಲಿ ಅಭಿಮಾನದಿಂದ ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಅಮೀರ್ ಜಾನ್, ಬಾಬಾಜಾನ್, ಕರಿಯಪ್ಪ, ಡಿ.ಟಿ ಶ್ರೀಧರ್ ಸೇರಿದಂತೆ ಇನ್ನಿತರರು ಮಹಮದ್ ಸನಾವುಲ್ಲಾ ಅವರನ್ನು ಅಭಿನಂದಿಸಿ ಮಾತನಾಡಿ, ಎಲ್ಲಾ ಧರ್ಮ, ಜಾತಿ ಜನಾಂಗದವರೊಂದಿಗೆ ಉತ್ತಮ ಸೌಹರ್ದತೆ ಕಾಯ್ದುಕೊಂಡು ಬಂದಿರುವ ಮಹಮದ್ ಸನಾವುಲ್ಲಾರವರು ಹೃದಯ ಶ್ರೀಮಂತಿಕೆ ವ್ಯಕ್ತಿಯಾಗಿದ್ದಾರೆ.  ಸಮಾಜದಲ್ಲಿ ಇಂತಹವರು ಅಪರೂಪವಾಗಿದ್ದು, ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದರು. 
    ಪ್ರಮುಖರಾದ ಭಾಸ್ಕರ್ ಬಾಬು, ಚೌಡಪ್ಪ, ತರುಣ್‌ಕುಮಾರ್, ರಮೇಶ್, ಶಂಕರ್ ರಾವ್, ಇಬ್ರಾಹಿಂ ಖಾನ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

No comments:

Post a Comment