ಗೋಹತ್ಯೆ ತಡೆಯುವಂತೆ ದೂರು ವಾಟ್ಸಫ್ನಲ್ಲಿ ಮಾಹಿತಿ ನೀಡಿರುವುದು.
ಭದ್ರಾವತಿ : ತಾಲೂಕಿನಲ್ಲಿ ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುತ್ತಿದ್ದು, ಈ ಬಾರಿ ಸಹ ಗೋ ಹತ್ಯೆ ನಡೆಸಲಾಗಿದೆ. ಗೋ ಹತ್ಯೆ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿದರೂ ಸಹ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಿದ್ದಾರೆಂದು ಹಿಂದೂ ಜಾಗರಣ ವೇದಿಕೆ ಮುಖಂಡ, ಸಾಮಾಜಿಕ ಕಾರ್ಯಕರ್ತ ದೇವರಾಜ್ ಅರಳಿಹಳ್ಳಿ ಆರೋಪಿಸಿದ್ದಾರೆ.
ಯಾವುದೇ ಪರವಾನಗಿ ಇಲ್ಲದೆ, ರೈತರಲ್ಲದವರು ಹಬ್ಬದ ಹಿಂದಿನ ದಿನ ಹತ್ಯೆ ಮಾಡಲು ತಂದಿರುವ ಗೋವುಗಳನ್ನು ರಕ್ಷಿಸುವಂತೆ ಸಾಕ್ಷಿ ಸಮೇತ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗು ನಗರದ ಪೊಲೀಸ್ ಉಪಾಧೀಕ್ಷಕರಿಗೆ ಮೊಬೈಲ್ ವಾಟ್ಸಫ್ ಮೂಲಕ ಮಾಹಿತಿ ನೀಡಲಾಗಿದೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಈ ಸಂಬಂಧ ಮುಂದಿನ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಗೇಹಳ್ಳದಲ್ಲಿ ತ್ಯಾಜ್ಯ ಪತ್ತೆ :
ಗೋವುಗಳನ್ನು ಹತ್ಯೆ ಮಾಡಿ ಅವುಗಳ ತ್ಯಾಜ್ಯ ಕಾಗೇಹಳ್ಳ ಭದ್ರಾ ನದಿ ಸೇತುವೆಗೆ ಎಸೆಯುತ್ತಿದ್ದು, ಈ ಬಾರಿ ಸಹ ತ್ಯಾಜ್ಯ ಪತ್ತೆಯಾಗಿದೆ. ಗೋವಿನ ತ್ಯಾಜ್ಯ ನದಿಗೆ ತಂದು ಎಸೆಯುವುದರಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಗೋವಿನ ತ್ಯಾಜ್ಯ ನದಿಗೆ ಎಸೆಯದಂತೆ ಕ್ರಮ ಗೊಳ್ಳಬೇಕೆಂದು ದೇವರಾಜ್ ಆಗ್ರಹಿಸಿದ್ದಾರೆ.
No comments:
Post a Comment