ಭಾನುವಾರ, ಜುಲೈ 27, 2025

ಪಡಿತರ ವಿತರಕರಿಗೆ ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಿ : ಸಿದ್ದಲಿಂಗಯ್ಯ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಸರ್ಕಾರ ತಕ್ಷಣ ಪಡಿತರ ವಿತರಿಕರಿಗೆ ಕೆವೈಸಿ ಕಮಿಷನ್ ಹಣ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಮಾಸಿಕದ ಪಡಿತರ ವಿಲೇವಾರಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಎಚ್ಚರಿಸಿದ್ದಾರೆ. 
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ೨೦೧೮ ರಿಂದ ೨೦೨೫ರ ವರೆಗೆ ನಿರಂತರವಾಗಿ ಶೇ.೯೮ ರಷ್ಟು ಕೆವೈಸಿ ಮಾಡಲಾಗಿದೆ. ಆದರೆ ಪಡಿತರ ವಿತರಕರಿಗೆ ೪-೫ ತಿಂಗಳಿನಿಂದ ಕಮಿಷನ್ ಹಣ ಬಂದಿರುವುದಿಲ್ಲ. ಈಗಾಗಲೇ ಈ ಸಂಬಂಧ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಡಿತರ ವಿತರಕರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಬೇಕೆಂದು ಕೋರಲಾಗಿದೆ.  
    ಸಂಘದ ತಾಲೂಕು ಶಾಖೆ ಗೌರವಾಧ್ಯಕ್ಷ ಕೃಷ್ಣೋಜಿರಾವ್, ಅಧ್ಯಕ್ಷ ಆರ್. ನಾಗೇಶ್, ಉಪಾಧ್ಯಕ್ಷ ಎಸ್. ರಾಜೇಂದ್ರ, ಕಾರ್ಯದರ್ಶಿ ಆರ್. ಮಣಿ, ಸಂಘಟನಾ ಕಾರ್ಯದರ್ಶಿ ಜಿ. ಕುಮಾರ್, ಖಜಾಂಚಿ ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ