Sunday, July 13, 2025

ನ್ಯಾಯಾಲಯದ ಲೋಕ ಅದಾಲತ್‌ನಲ್ಲಿ ೨೦೨೩ ಪ್ರಕರಣಗಳು ಇತ್ಯರ್ಥ

ಭದ್ರಾವತಿ ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್  ಹಾಗೂ ವಕೀಲರು ಮತ್ತು ಕಕ್ಷೀದಾರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 
    ಭದ್ರಾವತಿ: ನಗರದ ನ್ಯಾಯಾಲಯದಲ್ಲಿ ಜರುಗಿದ ಬೃಹತ್ ಲೋಕ ಅದಾಲತ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ವಿವಿಧ ರೀತಿಯ ೨೦೨೩ ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೊಂಡಿದ್ದು, ನಿರೀಕ್ಷೆಯಂತೆ ಲೋಕ ಅದಾಲತ್ ಬಹುತೇಕ ಯಶಸ್ವಿಯಾಗಿದೆ. 
    ವಿವಿಧ ಶ್ರೇಣಿಯ ನ್ಯಾಯಾಲಯಗಳಲ್ಲಿ ವಿಲೇವಾರಿಗೆ ಬಾಕಿ ಉಳಿದಿದ್ದ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ವಿವಿಧ ರೀತಿಯ ೨೦೨೩ ವ್ಯಾಜ್ಯ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಈ ಪೈಕಿ ಹಣಕಾಸಿನ ಸಂಬಂಧದ ಪ್ರಕರಣಗಳಲ್ಲಿ ೫,೪೨,೮೨,೭೯೦ ರು. ಪಾವತಿಸಲಾಯಿತು.
    ಲೋಕ ಅದಾಲತ್ ವಿವರ:
    ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ೧೯ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೩,೪೬,೨೩೯ ರು. ಹಾಗು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೧೯ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೧,೪೭,೩೦,೬೪೦ ರು. ಮತ್ತು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರರವರ ಸಮ್ಮುಖದಲ್ಲಿ ೨೮೧ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೧,೪೭,೬೩,೪೯೮ ರು. ಪಾವತಿಸಲಾಯಿತು. 
    ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ರವಿಕುಮಾರ್‌ರವರ ಸಮ್ಮುಖದಲ್ಲಿ ೫೨೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೩,೯೨,೮೪೯ ರು. ಹಾಗು ೧ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ರವಿಕುಮಾರ್‌ರವರು ೫೩೫ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ, ೪೩,೬೫,೧೫೨ ರು. ಪಾವತಿಸಲಾಯಿತು. 
    ೨ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶೃತಿರವರ ಸಮ್ಮುಖದಲ್ಲಿ ೫೮೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ, ೬೪,೦೮,೦೧೫ ರು. ಹಾಗು ೩ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶೃತಿರವರ ಸಮ್ಮುಖದಲ್ಲಿ ೪೭೯ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೯,೫೮,೭೩೪ ರು. ಮತ್ತು ೪ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಗಿರಿಜಾರವರ ಸಮ್ಮುಖದಲ್ಲಿ ೪೭೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೬೩,೧೭,೬೬೩ ರು. ಪಾವತಿಸಲಾಯಿತು. 

No comments:

Post a Comment