ಗುರುವಾರ, ಆಗಸ್ಟ್ 21, 2025

ಗ್ರಾಮಾಂತರ ಶಾಖೆ ಅಧ್ಯಕ್ಷರಾಗಿ ಶಕುಂತಲಾ ಪ್ರದೀಪ್, ನಗರ ಶಾಖೆ ಅಧ್ಯಕ್ಷರಾಗಿ ರೂಪ ನಾಗರಾಜ್

 ಶಕುಂತಲಾ ಪ್ರದೀಪ್ 
ಭದ್ರಾವತಿ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಗ್ರಾಮಾಂತರ ಶಾಖೆ ಅಧ್ಯಕ್ಷರಾಗಿ ಶಕುಂತಲಾ ಪ್ರದೀಪ್ ಮತ್ತು ನಗರ ಶಾಖೆ ಅಧ್ಯಕ್ಷರಾಗಿ ರೂಪ ನಾಗರಾಜ್ ನೇಮಕಗೊಂಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ನೇಮಕಾತಿ ಪತ್ರ ವಿತರಿಸಿ ಸಂಘಟನೆ ಬಲಪಡಿಸುವ ಜೊತೆಗೆ ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಸೂಚಿಸಿದ್ದಾರೆ. ನೂತನವಾಗಿ ನೇಮಕಗೊಂಡಿರುವ ಶಕುಂತಲಾ ಪ್ರದೀಪ್ ಮತ್ತು ರೂಪ ನಾಗರಾಜ್‌ರವರಿಗೆ ಜಿಲ್ಲಾ ಬಿಜೆಪಿ ಮುಖಂಡರು, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್ ಅಭಿನಂದಿಸಿದ್ದಾರೆ. 
 

 ರೂಪ ನಾಗರಾಜ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ