ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯ ವೇನ್ಸ್ ಹಾಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸೋನಿ ಗಾಯನ ಕಲಾವೃಂದದ ೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸೋನಿ ರಾಜ್ಯ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಅಪೇಕ್ಷ ಮಂಜುನಾಥ್ ಉದ್ಘಾಟಿಸಿದರು.
ಭದ್ರಾವತಿ : ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಕಲಾ ಕ್ಷೇತ್ರದ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಕರೆ ನೀಡಿದರು.
ಅವರು ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯ ವೇನ್ಸ್ ಹಾಲ್ ಸಭಾಂಗಣದಲ್ಲಿ ಗುರುವಾರ ಸೋನಿ ಗಾಯನ ಕಲಾವೃಂದದ ೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸೋನಿ ರಾಜ್ಯ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ನಗರದಲ್ಲಿ ನೂರಾರು ಮಂದಿ ರಂಗಭೂಮಿ, ಸಂಗೀತ, ನೃತ್ಯ, ಜಾನಪದ ಸೇರಿದಂತೆ ಹಲವಾರು ವಿಭಿನ್ನ ಕಲೆಗಳಲ್ಲಿ ಹಾಗು ಕುಸ್ತಿ, ಕಬ್ಬಡಿ ಸೇರಿದಂತೆ ಮುಂತಾದ ಕ್ರೀಡೆಗಳಲ್ಲಿ ರಾಷ್ಷ್ರಮಟ್ಟದವರೆಗೂ ಹೆಸರು ಮಾಡಿದ್ದರು. ಇದು ಕಲೆಗಳ ಬೀಡಾಗಿತ್ತು. ಕ್ರಮೇಣ ಎರಡು ಕಾರ್ಖಾನೆಗಳ ದು:ಸ್ಥಿತಿಯಿಂದಾಗಿ ಕಲಾ ಕ್ಷೇತ್ರದ ಬೆಳವಣಿಗೆ ಪೋತ್ಸಾಹವಿಲ್ಲದೆ ಹಿನ್ನಡೆಯಾಗುವ ಜೊತೆಗೆ ಕಲಾವಿದರು, ಕಲೆಗಳು ಕಣ್ಮರೆಯಾಗುತ್ತಿವೆ. ಕಲೆಯ ಬೀಡನ್ನು ಪುನಹ ಪ್ರತಿಷ್ಟಾಪಿಸಲು ಇಂತಹ ಕಲಾವಿದರಿಂದ ಸಾಧ್ಯವಿದೆ ಎಂದರು.
ಲಯನ್ಸ್ ಶುಗರ್ಟೌನ್ ಅಧ್ಯಕ್ಷ ಡಾ. ಗುರುರಾಜ್, ಲಯನ್ಸ್ ವಿಭಾಗೀಯ ಅಧ್ಯಕ್ಷ ಎಲ್. ದೇವರಾಜ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಪ್ರಸೂತಿ ತಜ್ಞ ವೈದ್ಯೆ ಡಾ. ವರ್ಷ, ನ್ಯಾಯವಾದಿ ಎ. ನಾರಾಯಣಸ್ವಾಮಿ ಮತ್ತು ಜನ್ನಾಪುರ ಸೌಂದರ್ಯ ವರ್ಧನ ತರಬೇತುದಾರರಾದ ಜಿ. ಸುಮಾ ಅವರನ್ನು ಸನ್ಮಾನಿಸಿ ಸೋನಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೋನಿ ಗಾಯನ ಕಲಾವೃಂದದ ಅಧ್ಯಕ್ಷ ಸೋನಿ ಹರೀಶ್ ಅಧ್ಯಕ್ಷತೆವಹಿಸಿ ಕೃತಜ್ಞತೆ ಸಲ್ಲಿದರು. ಕಲಾವಿದ ಅರುಣ್ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ